ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಮಯ್ಯ ಆಸ್ಪತ್ರೆ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಮೂರು ವಿಧಾನದಲ್ಲಿ ರೇಡಿಯೇಶನ್ ಥೆರಪಿ ಚಿಕಿತ್ಸೆ ನೀಡುವ ದಕ್ಷಿಣ ಭಾರತದ ಮೊದಲ ಆಸ್ಪತ್ರೆಯಾಗಿದೆ. ಕ್ಯಾನ್ಸರ್ ರೋಗಿಯನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸುವ ಸಂದರ್ಭದಲ್ಲಿ ಐಒಆರ್ಟಿ ಮೂಲಕ ನಿಗದಿತ ಕ್ಯಾನ್ಸರ್ ಗಡ್ಡೆಯ ಕೋಶಗಳನ್ನು (ಕ್ಯಾನ್ಸರ್ ಬೆಡ್ ಸೆಲ್ಗಳು) ನಾಶಪಡಿಸಲಾಗುತ್ತದೆ. ಈ ಚಿಕಿತ್ಸೆ ಆರೋಗ್ಯಕರ ಅಂಗಾಶಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ’ ಎಂದು ತಿಳಿಸಿದರು.