ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ನಾಡ ಸ್ಮರಣಾರ್ಥ ಉಪನ್ಯಾಸ ಇಂದು

Last Updated 18 ಮೇ 2020, 20:49 IST
ಅಕ್ಷರ ಗಾತ್ರ

ಬೆಂಗಳೂರು: ಜೀವನದುದ್ದಕ್ಕೂ ಶಾಂತಿ, ಸಹಬಾಳ್ವೆ ಮತ್ತು ಸೌಹಾರ್ದವನ್ನು ಪ್ರತಿಪಾದಿಸುತ್ತ ಬಂದಿದ್ದ ಗಿರೀಶ ಕಾರ್ನಾಡ ಅವರ 82ನೇ ಜನ್ಮದಿನೋತ್ಸವ ಪ್ರಯುಕ್ತ ರಂಗಶಂಕರ ಮಂಗಳವಾರ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ.

ಮೇ 19ರಂದು ಸಂಜೆ 5 ಗಂಟೆಗೆ ರಂಗಶಂಕರದಲ್ಲಿ ಗಿರೀಶ ಕಾರ್ನಾಡ ಅವರು ಈ ಹಿಂದೆ ನೀಡಿದ್ದ ಉಪನ್ಯಾಸದ ಮುದ್ರಿತ ವಿಡಿಯೊದ ಮರು ಪ್ರದರ್ಶನ ಮಾಡಲಾಗುವುದು. ರಂಗಶಂಕರ ಯುಟ್ಯೂಬ್‌ ಚಾನೆಲ್‌ನಲ್ಲಿ ಉಪನ್ಯಾಸದ ನೇರ ಪ್ರಸಾರ ಇರುತ್ತದೆ.

ಕಾರ್ನಾಡರ 75ನೇ ಜನ್ಮದಿನೋತ್ಸವ ಪ್ರಯುಕ್ತ ರಂಗಶಂಕರ 2013ರಲ್ಲಿ ಆಯೋಜಿಸಿದ್ದ ವಾರ್ಷಿಕ ನಾಟಕೋತ್ಸವ ಉದ್ಘಾಟಿಸಿ ಅವರು ಮಾಡಿದ ಭಾಷಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT