ಹೊರಮಾವು ಬೃಂದಾವನ ಬಡಾವಣೆಯ ಅಪರಾಧಿ ತಂಗಪ್ಪನ್, ಪುಲಿಕೇಶಿನಗರದ ಹಚಿನ್ಸ್ ರಸ್ತೆಯಲ್ಲಿ ಔಷಧಿ ಮಳಿಗೆ ನಡೆಸುತ್ತಿದ್ದ. ಔಷಧ ಮಳಿಗೆ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಪರಿಚಯಸ್ಥರಿಗೆ ಹೇಳಿದ್ದ. ಈತನ ಮಾತು ನಂಬಿದ್ದ ಉಮಾಶಂಕರ್, ಎಲಿಜಬತ್ ಡಿಸೋಜ ಹಾಗೂ ಇತರರು ₹ 33 ಲಕ್ಷ ನೀಡಿದ್ದರು. ಜೊತೆಗೆ, ಪಾಲುದಾರಿಕೆ ಕರಾರು ಪತ್ರ ಸಹ ಮಾಡಿಸಿದ್ದರು. ಏಕಾಏಕಿ ಮಳಿಗೆ ಬಂದ್ ಮಾಡಿದ್ದ ತಂಗಪ್ಪನ್, ಹೂಡಿಕೆದಾರರಿಗೆ ಹಣ ವಾಪಸು ಕೊಡದೇ ಬೆಂಗಳೂರು ತೊರೆದಿದ್ದ. ವಂಚನೆಗೀಡಾಗಿದ್ದ ಉಮಾಶಂಕರ್ ಹಾಗೂ ಇತರರು, ಪುಲಿಕೇಶಿನಗರ ಠಾಣೆಗೆ ದೂರು ನೀಡಿದ್ದರು.