ಆನೇಕಲ್ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಎಂ.ಮಲ್ಲೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೇವ್ ಪಾರ್ಟಿ ಅನಧಿಕೃತವಾಗಿ ನಡೆದಿದೆ. ಅಶಿಕ್ ಗೌಡ ಮತ್ತು ಪ್ರವಣ್ ಎಂಬುವವರು ಪಾರ್ಟಿ ಆಯೋಜನೆ ಮಾಡಿದ್ದರು ಎಂಬ ಮಾಹಿತಿ ಇದೆ. ಗ್ರೀನ್ ರೆಸಾರ್ಟ್ನ ಮ್ಯಾನೇಜರ್ ಕಿರಣ್, ಸುನೀಲ್ ಅವರೊಂದಿಗೆ ವ್ಯವಹರಿಸಿ ರೇವ್ ಪಾರ್ಟಿ ಆಯೋಜನೆ ಮಾಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಎಚ್.ಆರ್.ಮಹಾನಂದ್, ಸಬ್ಇನ್ಸ್ಪೆಕ್ಟರ್ ಮಧುಸೂದನ್ ಇದ್ದರು.