‘ಸ್ನೇಹಿತರೊಬ್ಬರ ಮೂಲಕ ಪರಿಚಯವಾಗಿದ್ದ ಆರೋಪಿಗಳು, ₹ 1.50 ಲಕ್ಷಕ್ಕೆ ದೇವನಹಳ್ಳಿ ಬಳಿ ನಿವೇಶನ ನೀಡುವುದಾಗಿ ಹೇಳಿದ್ದರು. ಅದನ್ನು ನಂಬಿ ವೈದ್ಯೆ ಹಣ ಕೊಟ್ಟಿದ್ದರು. ಪ್ರತಿಯಾಗಿ ಸೊಸೈಟಿ ಹೆಸರಿನ ಪ್ರಮಾಣ ಪತ್ರ ಪಡೆದಿದ್ದರು. ನಂತರ, ಸ್ನೇಹಿತರು ಹಾಗೂ ಸಂಬಂಧಿಕರಿಂದ ಹಣ ಕೊಡಿಸಿ ನಿವೇಶನ ಖರೀದಿಸುವಂತೆ ಮಾಡಿದ್ದರು.’