‘ಓಕಳಿಪುರ–ರಾಜಾಜಿನಗರ ಪ್ರಮುಖ ರಸ್ತೆಯಲ್ಲಿರುವ ರೇಷ್ಮೆ ಭವನದ ಎದುರು ಅ. 16ರಂದು ನಿಂತಿದ್ದ ಆರೋಪಿಗಳು, ಬ್ಯಾಗ್ ಹಿಡಿದುಕೊಂಡಿದ್ದರು. ಅವರಿಬ್ಬರ ಬಗ್ಗೆ ಅನುಮಾನಗೊಂಡಿದ್ದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ರಕ್ತಚಂದನ ಮಾರಲು ಬಂದಿರುವುದಾಗಿ ತಪ್ಪೊಪ್ಪಿಕೊಂಡರು. ಬ್ಯಾಗ್ಗಳಲ್ಲಿ ರಕ್ತಚಂದನದ ಸಣ್ಣ ತುಂಡುಗಳಿದ್ದವು’ ಎಂದು ತಿಳಿಸಿದರು.