ಮೂಲತಃ ನಾನು ಭಾರತದವಳು. ಆದರೆ ಇಂಗ್ಲೆಂಡಿನಲ್ಲಿ ನೆಲೆಸಿದ್ದೇನೆ. ನಾನು ಬೆಂಗಳೂರಿಗೆ ಹಲವಾರು ಬಾರಿ ಬಂದಿದ್ದೇನೆ. ಆದರೆ ಇದೇ ಮೊದಲ ಫಲಪುಷ್ಪ ಪ್ರದರ್ಶನ ವೀಕ್ಷಿಸುತ್ತಿದ್ದೇನೆ. ಒಂದೇ ವೇದಿಕೆಯಲ್ಲಿ ವಿವಿಧ ಬಣ್ಣದ ಹೂವುಗಳನ್ನು ನೋಡುತ್ತಿರುವುದು ಖುಷಿ ನೀಡಿದೆ.ಮೀನಾಕ್ಷಿ, ಬ್ರಿಟನ್ ನಿವಾಸಿ
ವಾಲ್ಮೀಕಿ ಅವರ ಜೀವನದ ಸಂಪೂರ್ಣ ಮಾಹಿತಿಯನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಲಾಗಿದೆ. ಪ್ರತಿಯೊಬ್ಬರೂ ಪ್ರದರ್ಶನಕ್ಕೆ ಭೇಟಿ ನೀಡಿ ಅವರ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.ಸೌಮ್ಯಾ ನಾಗರಬಾವಿ
ರಾಮಾಯಣ ಮಹಾಕಾವ್ಯ ಬರೆದಂತಹ ಮಹರ್ಷಿ ವಾಲ್ಮೀಕಿ ಅವರ ಜೀವನದ ವಿವಿಧ ಘಟನೆಗಳು ಅವರು ಕ್ರಮಿಸಿದ ಮಾರ್ಗಗಳ ಕುರಿತ ಮಾದರಿಗಳನ್ನು ಪುಷ್ಪಗಳ ಅನಾವರಣ ಮಾಡಲಾಗಿದೆ. ಶಾಲಾ–ಕಾಲೇಜಿನ ಮಕ್ಕಳು ಬಂದು ಈ ಪ್ರದರ್ಶನದ ಲಾಭ ಪಡೆದುಕೊಳ್ಳಬೇಕು.ಅಮಿತ್ ನಾಗರಬಾವಿ
ವಾಲ್ಮೀಕಿ ರಾಮಾಯಣದ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನ ಆಯೋಜಿಸಿರುವುದು ಬಹಳ ಖುಷಿ ನೀಡಿದೆ. ರಾಮಾಯಣ ಮಹಾಕಾವ್ಯದ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ನಗರ ಪ್ರದೇಶದಲ್ಲಿ ಪ್ರಕೃತಿಯ ಸೊಬಗು ನೋಡಲು ಸಿಗುವುದೇ ಅಪರೂಪ. ಅಂತಹದರಲ್ಲಿ ಒಂದೇ ವೇದಿಕೆಯಲ್ಲಿ ಲಕ್ಷಾಂತರ ಹೂವುಗಳನ್ನು ನೋಡುತ್ತಿರುವುದು ಮನಸಿಗೆ ಮುದ ನೀಡುತ್ತದೆ.ಸ್ವಪ್ನಾ, ಬಿಟಿಎಂಪಿ ಲೇಔಟ್
ಫಲಪುಷ್ಪ ಪ್ರದರ್ಶನ ನೋಡುವುದಕ್ಕೆ ಪ್ರತಿವರ್ಷ ಬರುತ್ತೇವೆ. ಈ ವರ್ಷ ವಾಲ್ಮೀಕಿ ಅವರ ಜೀವನ ಮತ್ತು ಸಾಧನೆಯನ್ನು ಪುಷ್ಪಗಳಲ್ಲಿ ಅನಾವರಣ ಮಾಡಿದ್ದಾರೆ. ಲಾಲ್ಬಾಗ್ನ ಪರಿಸರ ಮನಸಿಗೆ ನೆಮ್ಮದಿ ನೀಡುತ್ತದೆ. ಮಧ್ಯಪ್ರದೇಶದಲ್ಲಿರುವ ನಮ್ಮ ಸಂಬಂಧಿಕರು ಈ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದಿದ್ದಾರೆ.ಕೃಷ್ಣವೇಣಿ, ಇಸ್ರೊ ಲೇಔಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.