‘ಲಾಲ್ಬಾಗ್ ರಸ್ತೆ ಹಾಗೂ ಹೊಸೂರು ಮುಖ್ಯರಸ್ತೆಗಳಲ್ಲಿ ಒಂಟಿ ಯಾಗಿ ಕಾರು ಚಲಾಯಿಸುತ್ತಿದ್ದವರನ್ನೇ ಇಬ್ಬರು ಆರೋಪಿಗಳು ಗುರಿಯಾಗಿಸಿ ಹಣ ಸುಲಿಗೆ ಮಾಡುತ್ತಿದ್ದರು. ಹಿಂದಿನಿಂದ ಬೈಕ್ನಲ್ಲಿ ಬರುತ್ತಿದ್ದ ಆರೋಪಿಗಳು, ತಾವೇ ಮೊದಲು ಕಾರಿಗೆ ಡಿಕ್ಕಿ ಹೊಡೆಸುತ್ತಿದ್ದರು. ಬಳಿಕ, ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ ಎಂದು ಸುಳ್ಳು ಹೇಳಿ ಬೆದರಿಕೆ ಹಾಕುತ್ತಿದ್ದರು. ಹಣ ನೀಡದಿದ್ದರೆ ಪೊಲೀಸರಿಗೆ ದೂರು ನೀಡುವ ನಾಟಕವಾಡುತ್ತಿದ್ದರು. ಇದರಿಂದ ಕಾರು ಚಾಲಕರು ಹೆದರಿ ಕೇಳಿದಷ್ಟು ಹಣ ನೀಡುತ್ತಿದ್ದರು’ ಎಂದು ಮೂಲಗಳು ಹೇಳಿವೆ.