‘ಬಸ್ನಲ್ಲಿ ಕುಳಿತಿದ್ದ ನಾನು, ಬ್ಯಾಗ್ನ್ನು ಕಾಲಿನ ಕೆಳಗೆ ಇಟ್ಟಿದ್ದೆ. ಅದೇ ಬಸ್ಗೆ ಹತ್ತಿದ್ದ ಇಬ್ಬರ ಪೈಕಿ ಒಬ್ಬ ಚಿಲ್ಲರೆ ಹಣವನ್ನು ನಾನು ಕುಳಿತಿದ್ದ ಸೀಟಿನಡಿಗೆ ಬಿಸಾಕಿದ್ದ. ಮತ್ತೊಬ್ಬ ನನ್ನ ಬ್ಯಾಗ್ನ್ನು ಲಗೇಜ್ ಕ್ಯಾರಿಯರ್ನಲ್ಲಿ ಇಡುವುದಾಗಿ ಹೇಳಿ, ಬಳಿಕ ಚಿಲ್ಲರೆ ಹಣ ಹೆಕ್ಕಿಕೊಂಡು ಬಸ್ಸಿನಿಂದ ಇಳಿದು ಹೋಗಿದ್ದ. ಕೆಲಹೊತ್ತಿನ ಬಳಿಕ ನಾನು ಬ್ಯಾಗ್ ಪರಿಶೀಲಿಸಿದಾಗ, ಅದರೊಳಗಿದ್ದ ₹ 80 ಸಾವಿರ ನಾಪತ್ತೆಯಾಗಿತ್ತು’ ಎಂದು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಪ್ರೇಮಾ ದೂರು ನೀಡಿದ್ದಾರೆ.