ಬೆಂಗಳೂರು: ಶ್ರೀತ್ಯಾಗರಾಜ ಗಾನ ಸಭಾ ಟ್ರಸ್ಟ್ ಆಯೋಜಿಸುತ್ತಿರುವ 52ನೇ ವರ್ಷದ ಸಂಗೀತೋತ್ಸವದ ಸರ್ವಾಧ್ಯಕ್ಷರನ್ನಾಗಿ ವಿದ್ವಾನ್ ರುದ್ರಪಟ್ಣಂ ಎಸ್. ರಮಾಕಾಂತ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ 9 ರಿಂದ 12ರವರೆಗೆ ತ್ಯಾಗರಾಜ ಗಾನಸಭಾ ಟ್ರಸ್ಟ್ನಿಂದ 52ನೇ ವರ್ಷದ ಸುವರ್ಣ ಮಹೋತ್ಸವ ಸಂಗೀತೋತ್ಸವ ಸಮಾರಂಭವನ್ನು ಆಯೋಜಿಸ ಲಾಗುತ್ತಿದೆ. ರಾಜಾಜಿನಗರದ 1ನೇ ಕೆ ಬ್ಲಾಕ್ 19ನೇ ಬಿ ಮುಖ್ಯರಸ್ಥೆಯಲ್ಲಿರುವ ಬಾಲಮೋಹನ ವಿದ್ಯಾಮಂದಿರದಲ್ಲಿ ಸಂಗೀತೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.