ದೇಶದಲ್ಲಿ ಮಲಹೊರುವ ಪದ್ಧತಿಯು ಸಂವಿಧಾನ ಕೊಟ್ಟ ಅಸ್ತ್ರದಿಂದ ನಿರ್ಮೂಲನೆ ಆಯಿತು. ಆದರೆ, ಕೆಲವರು ಇಂದಿಗೂ ಮಾನ ಸಿಕವಾಗಿ ಮಲ ಹೊರುತ್ತಲೇ ಇದ್ದಾರೆ. ಬೆಳೆಸಿದ ಸಮಾಜವನ್ನೇ ತುಳಿಯುತ್ತಿದ್ದಾರೆ. ಬಹುತ್ವದ ಭಾರತ ಇಲ್ಲವಾಗುತ್ತಿದೆ. ಸಾವಿರಾರು ವರ್ಷಗಳಿಂದ ಅಸಮಾನತೆಗೆ ಕಾರಣರಾದವರು ವಿಜೃಂಭಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸಮಾನತೆಯಲ್ಲಿ ನಂಬಿಕೆ ಇಟ್ಟವರು ಕಣ್ಣು, ಕಿವಿ ಕಳೆದುಕೊಳ್ಳದೆ ಎಚ್ಚರವಹಿಸಬೇಕು ಎಂದು ಸಲಹೆನೀಡಿದರು.