‘ಜಾತಿ, ಹಣದ ಮೋಹಕ್ಕೆ ಒಳಗಾಗಿ ನಮ್ಮತನವನ್ನು ಮಾರಿಕೊಳ್ಳುತ್ತಿದ್ದೇವೆ.ಆಧುನಿಕ ನಾಗರಿಕತೆ ನಮ್ಮನ್ನು ಭ್ರಷ್ಟರನ್ನಾಗಿ ಮಾಡಿದೆ. ಚುನಾವಣೆಗಳಲ್ಲಿ ಹರಿಯುವ ಹಣದ ಹೊಳೆ ಲೆಕ್ಕಕ್ಕೆ ಸಿಗದಂತಾಗಿದ್ದು, ರಾಜಕೀಯ ಮುಖಂಡರು ನೀಡುವ ನೂರಾರು ರೂಪಾಯಿಗಳಿಗೆಜನತೆ ಅಂಗಲಾಚುತ್ತಿರುವುದು ಪ್ರಜಾಪ್ರಭುತ್ವದ ವಿಪರ್ಯಾಸ. ಇನ್ನೊಂದೆಡೆ, ಜಾಗತೀಕರಣವನ್ನು ಗಾಂಧೀಜಿ ವಿರೋಧಿಸಿದ್ದರು. ಇದೀಗ ಅದರ ಹೊಡೆತಕ್ಕೆ ಸಿಲುಕಿ, ನಲುಗಿ ಹೋಗಿದ್ದೇವೆ’ ಎಂದುಕೃಷ್ಣ ತಿಳಿಸಿದರು.