‘ಆಗಸ್ಟ್ 11ರಂದು ರಾತ್ರಿನಡೆದ ಗಲಭೆ ಸಂಬಂಧ ಶುಕ್ರವಾರ ಬೆಳಿಗ್ಗೆ ವಿಚಾರಣೆಗಾಗಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬನ್ನಿ’ ಎಂದು ಪೊಲೀಸರು ನೋಟಿಸ್ ನೀಡಿದ್ದರು. ಅದಕ್ಕೆ ಉತ್ತರಿಸಿರುವ ಸಂಪತ್ ರಾಜ್, ‘ಕೊರೊನಾ ದೃಢಪಟ್ಟಿರುವುದರಿಂದ ವಿಚಾರಣೆಗೆ ಬರಲು ಆಗುತ್ತಿಲ್ಲ. ಗುಣಮುಖವಾದ ನಂತರ ಕಚೇರಿಗೆ ಬರುತ್ತೇನೆ’ ಎಂದಿದ್ದಾರೆ.