<p><strong>ಬೆಂಗಳೂರು</strong>: ಕೋವಿಡ್ ಸಂಕಷ್ಟದಲ್ಲಿರುವ ಕಲಾವಿದರಿಗೆ ₹2 ಸಾವಿರ ಧನಸಹಾಯವನ್ನು ಇನ್ನೂ ಆರು ತಿಂಗಳು ನೀಡಬೇಕು ಎಂದು ಸಮುದಾಯ ಕರ್ನಾಟಕ ಸಂಸ್ಥೆ ಒತ್ತಾಯಿಸಿದೆ.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಅವರನ್ನು ಸಮುದಾಯ ರಾಜ್ಯ ಸಮಿತಿ ಉಪಾಧ್ಯಕ್ಷ ಟಿ. ಸುರೇಂದ್ರರಾವ್, ಸಹ ಕಾರ್ಯದರ್ಶಿ ಜೆ.ಸಿ. ಶಶಿಧರ್, ಸದಸ್ಯ ಪುರುಷೋತ್ತಮ ಕಲಾಲಬಂಡಿ ಮತ್ತು ವೆಂಕಟೇಶ ಪ್ರಸಾದ್ ಒಳಗೊಂಡ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.</p>.<p>‘ಕಷ್ಟದಲ್ಲಿರುವ ಕಲಾವಿದರಿಗೆ ನಿರ್ದಿಷ್ಟ ನಿಯಮಗಳ ಆಧಾರದಲ್ಲಿ ಧನಸಹಾಯ ನೀಡಲಾಗಿದೆ. ಸಮುದಾಯದ ಮನವಿಯಂತೆ ಈ ಯೋಜನೆಯನ್ನು ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದು ರಂಗಪ್ಪ ತಿಳಿಸಿದ್ದಾರೆ. ಸಹಾಯಧನ ಸಿಗದಿದ್ದವರು ಗಮನಕ್ಕೆ ತಂದರೆ ಪರಿಶೀಲಿಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ’ ಎಂದು ಸಮುದಾಯದ ಪ್ರಧಾನ ಕಾರ್ಯದರ್ಶಿ ಎಸ್. ದೇವೇಂದ್ರಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಕೆಲ ಕಲಾವಿದರು ಮರಣ ಹೊಂದಿದ ಮೇಲೂ ಮಾಸಾಶನ ವಿತರಣೆಯಾಗುತ್ತಿದ್ದ ಕಾರಣ ಅದನ್ನು ತಡೆಯಲು ಎಲ್ಲಾ ಕಲಾವಿದರಿಗೂ ತಮ್ಮ ದಾಖಲೆ ಪತ್ರಗಳನ್ನು ಸಲ್ಲಿಸಬೇಕೆಂದು ತಿಳಿಸಲಾಗಿತ್ತು. ಮಾಸಾಶನಕ್ಕೆ ಅರ್ಹರಾದ ಕಲಾವಿದರು ಇ–ಮೇಲ್ ಅಥವಾ ವಾಟ್ಸ್ಆ್ಯಪ್ನಲ್ಲಿ ಸಲ್ಲಿಸಬಹುದು ಎಂದೂ ಮಾಹಿತಿ ನೀಡಿದ್ದಾರೆ’ ಎಂದು ವಿವರಿಸಿದ್ದಾರೆ.</p>.<p>‘ದೆಹಲಿ ಜೆಎನ್ಯು. ಕನ್ನಡ ಪೀಠದ ನಿರ್ದೇಶಕರ ಅವಧಿ ಸದ್ಯ ಮುಗಿಯುತ್ತಿದ್ದು, ಹೊಸ ನಿರ್ದೇಶಕರನ್ನು ನೇಮಕ ಮಾಡಿ ಕನ್ನಡ ಪೀಠವನ್ನು ಜೀವಂತವಾಗಿ ಇಡಲು ಮನವಿ ಸಲ್ಲಿಸಲಾಯಿತು’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕೋವಿಡ್ ಸಂಕಷ್ಟದಲ್ಲಿರುವ ಕಲಾವಿದರಿಗೆ ₹2 ಸಾವಿರ ಧನಸಹಾಯವನ್ನು ಇನ್ನೂ ಆರು ತಿಂಗಳು ನೀಡಬೇಕು ಎಂದು ಸಮುದಾಯ ಕರ್ನಾಟಕ ಸಂಸ್ಥೆ ಒತ್ತಾಯಿಸಿದೆ.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಅವರನ್ನು ಸಮುದಾಯ ರಾಜ್ಯ ಸಮಿತಿ ಉಪಾಧ್ಯಕ್ಷ ಟಿ. ಸುರೇಂದ್ರರಾವ್, ಸಹ ಕಾರ್ಯದರ್ಶಿ ಜೆ.ಸಿ. ಶಶಿಧರ್, ಸದಸ್ಯ ಪುರುಷೋತ್ತಮ ಕಲಾಲಬಂಡಿ ಮತ್ತು ವೆಂಕಟೇಶ ಪ್ರಸಾದ್ ಒಳಗೊಂಡ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.</p>.<p>‘ಕಷ್ಟದಲ್ಲಿರುವ ಕಲಾವಿದರಿಗೆ ನಿರ್ದಿಷ್ಟ ನಿಯಮಗಳ ಆಧಾರದಲ್ಲಿ ಧನಸಹಾಯ ನೀಡಲಾಗಿದೆ. ಸಮುದಾಯದ ಮನವಿಯಂತೆ ಈ ಯೋಜನೆಯನ್ನು ಇನ್ನೂ ಆರು ತಿಂಗಳ ಅವಧಿಗೆ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದು ರಂಗಪ್ಪ ತಿಳಿಸಿದ್ದಾರೆ. ಸಹಾಯಧನ ಸಿಗದಿದ್ದವರು ಗಮನಕ್ಕೆ ತಂದರೆ ಪರಿಶೀಲಿಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ’ ಎಂದು ಸಮುದಾಯದ ಪ್ರಧಾನ ಕಾರ್ಯದರ್ಶಿ ಎಸ್. ದೇವೇಂದ್ರಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p>‘ಕೆಲ ಕಲಾವಿದರು ಮರಣ ಹೊಂದಿದ ಮೇಲೂ ಮಾಸಾಶನ ವಿತರಣೆಯಾಗುತ್ತಿದ್ದ ಕಾರಣ ಅದನ್ನು ತಡೆಯಲು ಎಲ್ಲಾ ಕಲಾವಿದರಿಗೂ ತಮ್ಮ ದಾಖಲೆ ಪತ್ರಗಳನ್ನು ಸಲ್ಲಿಸಬೇಕೆಂದು ತಿಳಿಸಲಾಗಿತ್ತು. ಮಾಸಾಶನಕ್ಕೆ ಅರ್ಹರಾದ ಕಲಾವಿದರು ಇ–ಮೇಲ್ ಅಥವಾ ವಾಟ್ಸ್ಆ್ಯಪ್ನಲ್ಲಿ ಸಲ್ಲಿಸಬಹುದು ಎಂದೂ ಮಾಹಿತಿ ನೀಡಿದ್ದಾರೆ’ ಎಂದು ವಿವರಿಸಿದ್ದಾರೆ.</p>.<p>‘ದೆಹಲಿ ಜೆಎನ್ಯು. ಕನ್ನಡ ಪೀಠದ ನಿರ್ದೇಶಕರ ಅವಧಿ ಸದ್ಯ ಮುಗಿಯುತ್ತಿದ್ದು, ಹೊಸ ನಿರ್ದೇಶಕರನ್ನು ನೇಮಕ ಮಾಡಿ ಕನ್ನಡ ಪೀಠವನ್ನು ಜೀವಂತವಾಗಿ ಇಡಲು ಮನವಿ ಸಲ್ಲಿಸಲಾಯಿತು’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>