<p><strong>ಬೆಂಗಳೂರು</strong>: ‘ಇಂದು ಸನಾತನದ ಬಗ್ಗೆ ಮಾತನಾಡುತ್ತಿರುವ ವ್ಯಕ್ತಿಗಳು ಧರ್ಮದ ಕುರಿತು ಮಾತನಾಡುತ್ತಿಲ್ಲ. ರಾಜಕಾರಣವನ್ನೇ ಧರ್ಮವೆಂದು ಭಾವಿಸಿ ಮಾತನಾಡುತ್ತಿದ್ದಾರೆ’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.</p>.<p>ನಗರದಲ್ಲಿ ಬಯಲು ಬಳಗ ಆಯೋಜಿಸಿದ್ದ ಸನಾತನ ಮಾತು–ಸಂವಾದದಲ್ಲಿ ಅವರು ಮಾತನಾಡಿದರು.</p>.<p>‘ಸನಾತನಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಸನಾತನದ ಬಗ್ಗೆ ಮಾತನಾಡುತ್ತಿರುವ ವ್ಯಕ್ತಿಗಳು ಹೇಳುತ್ತಾರೆ. ಆದರೆ, ಆ ಇತಿಹಾಸದ ನಿಜವಾದ ಗ್ರಹಿಕೆ ಮತ್ತು ಮಂಡನೆ ಅವರಿಗೆ ಸಾಧ್ಯವೇ ಇಲ್ಲ. ಸನಾತನ ಎಂದರೆ ಪುರಾತನ, ಶಾಶ್ವತ ಎಂದೂ ಅವರು ವಾದಿಸುತ್ತಿದ್ದಾರೆ’ ಎಂದರು.</p>.<p>‘ಸಿಂಧೂ ನಾಗರಿಕತೆ ನಮಗೆ ನಿಜವಾಗಿಯೂ ಪುರಾತನವಾದುದು. ಅಂದಿನ ಕಾಲದಲ್ಲಿ ಹೆಣ್ಣು ದೇವತೆಯ ಆರಾಧನೆ, ಪಶುಪತಿ ಆರಾಧನೆಗಳು ಇದ್ದವು. ಅವು ನಮಗೆ ಗೋಚರ ಆಗುವಂತೆ ಬುಡಕಟ್ಟಿನ ಆರಾಧನೆಗಳಾಗಿದ್ದವು. ಆದರೆ, ಮನುಧರ್ಮಶಾಸ್ತ್ರದ ನಿಯಮಗಳನ್ನು ಮುಖ್ಯವಾಗಿಸಿಕೊಂಡು ಜನಸಮುದಾಯವನ್ನು ನಿಯಂತ್ರಿಸಲು ಸನಾತನಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.</p>.<p>ಕಾರ್ಯಕ್ರಮದಲ್ಲಿ ರವಿಕುಮಾರ್ ಬಾಗಿ, ಡಿ.ಆರ್.ದೇವರಾಜ್, ಚಂದ್ರಕಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಇಂದು ಸನಾತನದ ಬಗ್ಗೆ ಮಾತನಾಡುತ್ತಿರುವ ವ್ಯಕ್ತಿಗಳು ಧರ್ಮದ ಕುರಿತು ಮಾತನಾಡುತ್ತಿಲ್ಲ. ರಾಜಕಾರಣವನ್ನೇ ಧರ್ಮವೆಂದು ಭಾವಿಸಿ ಮಾತನಾಡುತ್ತಿದ್ದಾರೆ’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.</p>.<p>ನಗರದಲ್ಲಿ ಬಯಲು ಬಳಗ ಆಯೋಜಿಸಿದ್ದ ಸನಾತನ ಮಾತು–ಸಂವಾದದಲ್ಲಿ ಅವರು ಮಾತನಾಡಿದರು.</p>.<p>‘ಸನಾತನಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಸನಾತನದ ಬಗ್ಗೆ ಮಾತನಾಡುತ್ತಿರುವ ವ್ಯಕ್ತಿಗಳು ಹೇಳುತ್ತಾರೆ. ಆದರೆ, ಆ ಇತಿಹಾಸದ ನಿಜವಾದ ಗ್ರಹಿಕೆ ಮತ್ತು ಮಂಡನೆ ಅವರಿಗೆ ಸಾಧ್ಯವೇ ಇಲ್ಲ. ಸನಾತನ ಎಂದರೆ ಪುರಾತನ, ಶಾಶ್ವತ ಎಂದೂ ಅವರು ವಾದಿಸುತ್ತಿದ್ದಾರೆ’ ಎಂದರು.</p>.<p>‘ಸಿಂಧೂ ನಾಗರಿಕತೆ ನಮಗೆ ನಿಜವಾಗಿಯೂ ಪುರಾತನವಾದುದು. ಅಂದಿನ ಕಾಲದಲ್ಲಿ ಹೆಣ್ಣು ದೇವತೆಯ ಆರಾಧನೆ, ಪಶುಪತಿ ಆರಾಧನೆಗಳು ಇದ್ದವು. ಅವು ನಮಗೆ ಗೋಚರ ಆಗುವಂತೆ ಬುಡಕಟ್ಟಿನ ಆರಾಧನೆಗಳಾಗಿದ್ದವು. ಆದರೆ, ಮನುಧರ್ಮಶಾಸ್ತ್ರದ ನಿಯಮಗಳನ್ನು ಮುಖ್ಯವಾಗಿಸಿಕೊಂಡು ಜನಸಮುದಾಯವನ್ನು ನಿಯಂತ್ರಿಸಲು ಸನಾತನಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.</p>.<p>ಕಾರ್ಯಕ್ರಮದಲ್ಲಿ ರವಿಕುಮಾರ್ ಬಾಗಿ, ಡಿ.ಆರ್.ದೇವರಾಜ್, ಚಂದ್ರಕಲಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>