‘ಬೆಳಿಗ್ಗೆ 10ಕ್ಕೆ ಬಾಗಲಗುಂಟೆ ಬಸ್ ನಿಲ್ದಾಣದಿಂದ ರಂಗಮಂದಿರದವರೆಗೂ ಕಲಾತಂಡಗಳೊಂದಿಗೆ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ‘ಸ್ನೇಹ ಜೀವಿ ರತ್ನ ಪ್ರಶಸ್ತಿ' ಪ್ರದಾನ, ಗೀತ ಗಾಯನ, ಪುಸ್ತಕ ಲೋಕಾರ್ಪಣೆ, ನೃತ್ಯಪ್ರದರ್ಶನ ನೆಡೆಯಲಿವೆ' ಎಂದು ಸ್ನೇಹಜೀವಿ ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷ ಶಶಿಕಾಂತ್ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.