<p><strong>ಬೆಂಗಳೂರು:</strong> ‘ಇಂದು ಮೊಬೈಲ್ನಲ್ಲೇ ಜಗತ್ತನ್ನು ಕಾಣುವುದು ಸಾಧ್ಯವಿದ್ದರೂ, ನಮ್ಮ ಆರೋಗ್ಯ, ಜ್ಞಾನ ಸಂಪಾದನೆಗಾಗಿ ಮೊಬೈಲ್ ಬದಿಗಿಟ್ಟು, ಪುಸ್ತಕ ಕೈಗೆತ್ತಿಕೊಳ್ಳುವುದು ಒಳ್ಳೆಯದು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.</p>.<p>ನಗರದ ಗಾಂಧಿ ಭವನದಲ್ಲಿ ಶನಿವಾರಸಪ್ನ ಬುಕ್ ಹೌಸ್ನಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತಪ್ರಕಟಿಸಲಾದ 50 ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಆಶೀರ್ವದಿಸಿದರು.</p>.<p>‘ಒಂದು ಪುಸ್ತಕ ಬದುಕನ್ನೇ ಬದಲಿಸಬಲ್ಲುದು ಎಂಬುದಕ್ಕೆ ಖ್ಯಾತ ವಿಜ್ಞಾನಿ ಐನ್ಸ್ಟೀನ್ ನಿದರ್ಶನ, ಅವರಿಗೆ 21 ವರ್ಷವಾಗಿದ್ದಾಗ ಸ್ನೇಹಿತರೊಬ್ಬರು ವಿಜ್ಞಾನ ಪುಸ್ತಕವೊಂದನ್ನು ನೀಡಿದ್ದರು. ಅದನ್ನು ಓದಿದ ಐನ್ಸ್ಟೀನ್ ವಿಜ್ಞಾನದತ್ತ ಪ್ರೇರಣೆಗೊಂಡು ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದರು’ ಎಂದರು.</p>.<p>ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ’ನಾವು ಇಂದು ಕೇವಲ 60–70 ಪದಗಳನ್ನಷ್ಟೇ ಬಳಸುತ್ತಿದ್ದೇವೆ. ರಾಜಕಾರಣಿಗಳನ್ನೂ ಕಣ್ಣು ತೆರೆಸುವಂತಹ ಪುಸ್ತಕಗಳು ಪ್ರಕಟವಾಗಬೇಕು‘ ಎಂದರು.</p>.<p>ಹಿರಿಯ ಸಾಹಿತಿಗಳಾದ ಕಮಲಾ ಹಂಪನಾ, ಹಂ.ಪ.ನಾಗರಾಜಯ್ಯ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ<br />ಮಾತನಾಡಿ, ಸಪ್ನ ಬುಕ್ ಹೌಸ್ನ ಕನ್ನಡ ಕಾಳಜಿಯನ್ನು ಕೊಂಡಾಡಿದರು. ಸಂಸ್ಥೆಯವ್ಯವಸ್ಥಾಪಕ ನಿರ್ದೇಶಕ<br />ನಿತಿನ್ ಶಾ ಇದ್ದರು.</p>.<p>ಸಿದ್ದಲಿಂಗಯ್ಯ, ಕಮಲಾ ಹಂಪನಾ, ಜೋಗಿ, ಸಿ.ಆರ್.ಚಂದ್ರಶೇಖರ್, ಡುಂಡಿರಾಜ್, ವಸುಂಧರಾ ಭೂಪತಿ, ಟಿ.ಆರ್. ಅನಂತರಾಮು ಸಹಿತ ಹಿರಿ, ಕಿರಿಯ ಲೇಖಕರ ಕೃತಿಗಳಿದ್ದವು. ಬಹುತೇಕ ಲೇಖಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಇಂದು ಮೊಬೈಲ್ನಲ್ಲೇ ಜಗತ್ತನ್ನು ಕಾಣುವುದು ಸಾಧ್ಯವಿದ್ದರೂ, ನಮ್ಮ ಆರೋಗ್ಯ, ಜ್ಞಾನ ಸಂಪಾದನೆಗಾಗಿ ಮೊಬೈಲ್ ಬದಿಗಿಟ್ಟು, ಪುಸ್ತಕ ಕೈಗೆತ್ತಿಕೊಳ್ಳುವುದು ಒಳ್ಳೆಯದು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.</p>.<p>ನಗರದ ಗಾಂಧಿ ಭವನದಲ್ಲಿ ಶನಿವಾರಸಪ್ನ ಬುಕ್ ಹೌಸ್ನಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತಪ್ರಕಟಿಸಲಾದ 50 ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಆಶೀರ್ವದಿಸಿದರು.</p>.<p>‘ಒಂದು ಪುಸ್ತಕ ಬದುಕನ್ನೇ ಬದಲಿಸಬಲ್ಲುದು ಎಂಬುದಕ್ಕೆ ಖ್ಯಾತ ವಿಜ್ಞಾನಿ ಐನ್ಸ್ಟೀನ್ ನಿದರ್ಶನ, ಅವರಿಗೆ 21 ವರ್ಷವಾಗಿದ್ದಾಗ ಸ್ನೇಹಿತರೊಬ್ಬರು ವಿಜ್ಞಾನ ಪುಸ್ತಕವೊಂದನ್ನು ನೀಡಿದ್ದರು. ಅದನ್ನು ಓದಿದ ಐನ್ಸ್ಟೀನ್ ವಿಜ್ಞಾನದತ್ತ ಪ್ರೇರಣೆಗೊಂಡು ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದರು’ ಎಂದರು.</p>.<p>ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ’ನಾವು ಇಂದು ಕೇವಲ 60–70 ಪದಗಳನ್ನಷ್ಟೇ ಬಳಸುತ್ತಿದ್ದೇವೆ. ರಾಜಕಾರಣಿಗಳನ್ನೂ ಕಣ್ಣು ತೆರೆಸುವಂತಹ ಪುಸ್ತಕಗಳು ಪ್ರಕಟವಾಗಬೇಕು‘ ಎಂದರು.</p>.<p>ಹಿರಿಯ ಸಾಹಿತಿಗಳಾದ ಕಮಲಾ ಹಂಪನಾ, ಹಂ.ಪ.ನಾಗರಾಜಯ್ಯ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ<br />ಮಾತನಾಡಿ, ಸಪ್ನ ಬುಕ್ ಹೌಸ್ನ ಕನ್ನಡ ಕಾಳಜಿಯನ್ನು ಕೊಂಡಾಡಿದರು. ಸಂಸ್ಥೆಯವ್ಯವಸ್ಥಾಪಕ ನಿರ್ದೇಶಕ<br />ನಿತಿನ್ ಶಾ ಇದ್ದರು.</p>.<p>ಸಿದ್ದಲಿಂಗಯ್ಯ, ಕಮಲಾ ಹಂಪನಾ, ಜೋಗಿ, ಸಿ.ಆರ್.ಚಂದ್ರಶೇಖರ್, ಡುಂಡಿರಾಜ್, ವಸುಂಧರಾ ಭೂಪತಿ, ಟಿ.ಆರ್. ಅನಂತರಾಮು ಸಹಿತ ಹಿರಿ, ಕಿರಿಯ ಲೇಖಕರ ಕೃತಿಗಳಿದ್ದವು. ಬಹುತೇಕ ಲೇಖಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>