<p><strong>ಬೆಂಗಳೂರು:</strong> ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ವತಿಯಿಂದ ರಿಯಾಯಿತಿ ದರದ ಸೀರೆ ಮಾರಾಟದಲ್ಲಿ ದುರುಪಯೋಗ ನಡೆದಿದೆ ಎಂದು ಕೆಲವು ಮಹಿಳೆಯರು ಆರೋಪಿಸಿದ್ದಾರೆ.</p>.<p>‘ಸೆ. 11ರಂದು ನಿಗಮದ ವತಿಯಿಂದ ₹ 14 ಸಾವಿರ ಮೌಲ್ಯದ ಮೈಸೂರು ಸಿಲ್ಕ್ಸ್ ಸೀರೆಗಳನ್ನು ನಿಗಮವು ₹ 4,500ಕ್ಕೆ ಮಾರಾಟಕ್ಕಿರಿಸಿತ್ತು. ದೊಡ್ಡ ಸಂಖ್ಯೆಯಲ್ಲಿ ಬಂದ ಮಹಿಳೆಯರು ಅಂದು ತಮ್ಮ ಆಧಾರ್ ಕಾರ್ಡ್ ನೀಡಿ ಕೂಪನ್ ಪಡೆದು ಸರದಿಯಲ್ಲಿ ಕಾದಿದ್ದರು. ಅಂದು ಕೆಲವರಿಗಷ್ಟೇ ಸೀರೆ ಸಿಕ್ಕಿತ್ತು. ಮರುದಿನವೂ ಬಂದ ಕೆಲವರು ಕೂಪನ್ ಇಲ್ಲದೆಯೇ ನಿಗಮದ ಸಿಬ್ಬಂದಿ, ಪೊಲೀಸರ ನೆರವಿನಿಂದ 2, 3 ಸೀರೆಗಳನ್ನು ಪಡೆದಿದ್ದಾರೆ. ಪ್ರಶ್ನಿಸಿದರೆ ಪೊಲೀಸರ ಮೂಲಕ ನಮ್ಮನ್ನು ಗದರಿಸಿದ್ದಾರೆ’ ಎಂದು ಗ್ರಾಹಕರಾದ ರತ್ನಾ ಆರೋಪಿಸಿದರು.</p>.<p>ಕೆಲವರು ಕೂಪನ್ಗಳನ್ನು ₹ 700ರಿಂದ ₹ 2 ಸಾವಿರದವರೆಗೆ ಮಾರಾಟ ಮಾಡಿದ್ದಾರೆ. ಅಗತ್ಯವುಳ್ಳವರಿಗೆ ಒಂದೂ ಸೀರೆ ಸಿಗದಂತಾಗಿದೆ ಎಂದು ಅವರು ಅಳಲು ತೋಡಿಕೊಂಡರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಐಸಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಭಾನುಪ್ರಕಾಶ್, ‘ರಿಯಾಯಿತಿ ದರದ ಮಾರಾಟವನ್ನು ಕೆಲವು ಗ್ರಾಹಕರು ದುರುಪಯೋಗ ಮಾಡಿಕೊಂಡಿದ್ದಾರೆ. ಆದರೆ, ಇವೆಲ್ಲವೂ ಮಳಿಗೆಯ ಹೊರಗೆ ನಡೆದಿದೆ. ಜನರೇ ಈ ರೀತಿ ಮಾಡಿದರೆ ನಾವೇನೂ ಮಾಡಲಾಗದು. ಇದರಲ್ಲಿ ನಿಗಮದ ಸಿಬ್ಬಂದಿ ಅಥವಾ ಅಧಿಕಾರಿಗಳ ಪಾತ್ರವಿಲ್ಲ. ಸೀರೆಗಳು ಮಾರಾಟವಾದ ಲೆಕ್ಕಾಚಾರ ನಡೆಯುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ರೇಷ್ಮೆ ಉದ್ಯಮ ನಿಗಮದ ವತಿಯಿಂದ ರಿಯಾಯಿತಿ ದರದ ಸೀರೆ ಮಾರಾಟದಲ್ಲಿ ದುರುಪಯೋಗ ನಡೆದಿದೆ ಎಂದು ಕೆಲವು ಮಹಿಳೆಯರು ಆರೋಪಿಸಿದ್ದಾರೆ.</p>.<p>‘ಸೆ. 11ರಂದು ನಿಗಮದ ವತಿಯಿಂದ ₹ 14 ಸಾವಿರ ಮೌಲ್ಯದ ಮೈಸೂರು ಸಿಲ್ಕ್ಸ್ ಸೀರೆಗಳನ್ನು ನಿಗಮವು ₹ 4,500ಕ್ಕೆ ಮಾರಾಟಕ್ಕಿರಿಸಿತ್ತು. ದೊಡ್ಡ ಸಂಖ್ಯೆಯಲ್ಲಿ ಬಂದ ಮಹಿಳೆಯರು ಅಂದು ತಮ್ಮ ಆಧಾರ್ ಕಾರ್ಡ್ ನೀಡಿ ಕೂಪನ್ ಪಡೆದು ಸರದಿಯಲ್ಲಿ ಕಾದಿದ್ದರು. ಅಂದು ಕೆಲವರಿಗಷ್ಟೇ ಸೀರೆ ಸಿಕ್ಕಿತ್ತು. ಮರುದಿನವೂ ಬಂದ ಕೆಲವರು ಕೂಪನ್ ಇಲ್ಲದೆಯೇ ನಿಗಮದ ಸಿಬ್ಬಂದಿ, ಪೊಲೀಸರ ನೆರವಿನಿಂದ 2, 3 ಸೀರೆಗಳನ್ನು ಪಡೆದಿದ್ದಾರೆ. ಪ್ರಶ್ನಿಸಿದರೆ ಪೊಲೀಸರ ಮೂಲಕ ನಮ್ಮನ್ನು ಗದರಿಸಿದ್ದಾರೆ’ ಎಂದು ಗ್ರಾಹಕರಾದ ರತ್ನಾ ಆರೋಪಿಸಿದರು.</p>.<p>ಕೆಲವರು ಕೂಪನ್ಗಳನ್ನು ₹ 700ರಿಂದ ₹ 2 ಸಾವಿರದವರೆಗೆ ಮಾರಾಟ ಮಾಡಿದ್ದಾರೆ. ಅಗತ್ಯವುಳ್ಳವರಿಗೆ ಒಂದೂ ಸೀರೆ ಸಿಗದಂತಾಗಿದೆ ಎಂದು ಅವರು ಅಳಲು ತೋಡಿಕೊಂಡರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್ಐಸಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಭಾನುಪ್ರಕಾಶ್, ‘ರಿಯಾಯಿತಿ ದರದ ಮಾರಾಟವನ್ನು ಕೆಲವು ಗ್ರಾಹಕರು ದುರುಪಯೋಗ ಮಾಡಿಕೊಂಡಿದ್ದಾರೆ. ಆದರೆ, ಇವೆಲ್ಲವೂ ಮಳಿಗೆಯ ಹೊರಗೆ ನಡೆದಿದೆ. ಜನರೇ ಈ ರೀತಿ ಮಾಡಿದರೆ ನಾವೇನೂ ಮಾಡಲಾಗದು. ಇದರಲ್ಲಿ ನಿಗಮದ ಸಿಬ್ಬಂದಿ ಅಥವಾ ಅಧಿಕಾರಿಗಳ ಪಾತ್ರವಿಲ್ಲ. ಸೀರೆಗಳು ಮಾರಾಟವಾದ ಲೆಕ್ಕಾಚಾರ ನಡೆಯುತ್ತಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>