<p><strong>ಬೆಂಗಳೂರು</strong>: ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿರುವ ಉಪಗ್ರಹ ಡಿಎಸ್ಎಟಿ-1 ಉಡ್ಡಯನ ಮಾಡುವುದಕ್ಕೆ ದಯಾನಂದ ಸಾಗರ ವಿಶ್ವವಿದ್ಯಾಲಯ (ಡಿಎಸ್ಯು) ಮುಂದಾಗಿದೆ. ಇಸ್ರೊದ ಪಿಎಸ್ಎಲ್ವಿ–ಸಿ62 ರಾಕೆಟ್ ಬಳಸಿ ಈ ಉಪಗ್ರಹ ಉಡ್ಡಯನ ಮಾಡಲಾಗುತ್ತದೆ.</p>.<p>ಅಟಲ್ ಇನ್ನೊವೇಶನ್ ಸೆಂಟರ್– ದಯಾನಂದ ಸಾಗರ್ ವಿಶ್ವವಿದ್ಯಾಲಯ (ಎಐಸಿ–ಡಿಎಸ್ಯು) ನೆರವಿನಿಂದ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕೇಂದ್ರವನ್ನು ನೀತಿ ಆಯೋಗ ಒದಗಿಸಿರುವ ₹ 10 ಕೋಟಿ ಅನುದಾನದಿಂದ ಸ್ಥಾಪಿಸಲಾಗಿದೆ.</p>.<p>ಡಿಎಸ್ಎಟಿ ಉಪಗ್ರಹವು ಸಂವಹನಕ್ಕೆ ಸಂಬಂಧಿಸಿದಂತೆ ಹಲವು ವೈಶಿಷ್ಟ್ಯ (ವಿವಿಧ ತರಂಗಾಂತರ, ರೇಡಿಯೊ ಬ್ಯಾಂಡ್) ಒಳಗೊಂಡಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಸ್ಥಾಪಿಸಲಾಗಿರುವ ‘ಗ್ರೌಂಡ್ ಸ್ಟೇಷನ್’ನಿಂದ ಈ ಉಪಗ್ರಹಕ್ಕೆ ಸಂದೇಶವನ್ನು (ಎಸ್ಎಂಎಸ್) ಕಳುಹಿಸಲಾಗುತ್ತದೆ. ಈ ಸೌಲಭ್ಯವನ್ನು ಧ್ರುವ ಸ್ಪೇಸ್ ಸ್ಥಾಪಿಸಿದೆ. ಇದರಿಂದ ಕಡಿಮೆ ಬ್ಯಾಂಡ್ ವಿಡ್ತ್ ಮೂಲಕ ಸಂವಹನ ಸಾಧ್ಯವಾಗಲಿದೆ. ಉಡ್ಡಯನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು, ಪರೀಕ್ಷೆಗಳು ಪೂರ್ಣಗೊಳಿಸಲಾಗಿದೆ.</p>.<p>ವಿಶ್ವವಿದ್ಯಾಲಯದ ಕುಲಾಧಿಪತಿ ಹೇಮಚಂದ್ರ ಸಾಗರ್, ‘ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಶ್ರಮದ ಫಲವಾಗಿ ಡಿಎಸ್ಎಟಿ–1 ಉಡ್ಡಯನಕ್ಕೆ ಸಿದ್ಧಗೊಂಡಿದೆ. ಉಡಾವಣೆಗೆ ವೇದಿಕೆಯನ್ನು ಒದಗಿಸಿದ ಇಸ್ರೊ ಹಾಗೂ ಧ್ರುವ ಸ್ಪೇಸ್ಗೆ ಕೃತಜ್ಞರಾಗಿದ್ದೇವೆ. ಡಿಎಸ್ಎಟಿ–1 ಕರ್ನಾಟಕದ ದೂರದೃಷ್ಟಿಯ ‘ಅಂತರಿಕ್ಷ ನೀತಿ 2024–2029’ಗೆ ಸಾಕ್ಷಿಯಾಗಿ ನಿಂತಿದೆ’ ಎಂದು ತಿಳಿಸಿದರು. <br /><br />ಸಹ ಕುಲಾಧಿಪತಿ ಡಿ.ಪ್ರೇಮ್ಚಂದ್ರ ಸಾಗರ್, ‘ಉಡಾವಣೆಯ ಬಳಿಕ ವಿಶ್ವವಿದ್ಯಾಲಯದ ‘ಗ್ರೌಂಡ್ ಸ್ಟೇಷನ್’ನಿಂದ ಕಾರ್ಯಾಚರಣೆಗಳನ್ನು ವಿದ್ಯಾರ್ಥಿಗಳು ಸ್ವತಂತ್ರವಾಗಿ ನಿರ್ವಹಿಸಲಿದ್ದಾರೆ. ಈ ಅವಧಿಯಲ್ಲಿ ಸಂಗ್ರಹವಾಗುವ ದತ್ತಾಂಶವು ಉಪಗ್ರಹ ಸಂವಹನ, ಮಿಷನ್ ಕಾರ್ಯಾಚರಣೆಗಳು ಹಾಗೂ ಅಂತರಿಕ್ಷ ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ ನಡೆಸುತ್ತಿರುವ ನಿರಂತರ ಸಂಶೋಧನೆಗೆ ಸಹಕಾರಿಯಾಗಲಿದೆ’ ಎಂದರು.</p>.<p>ಅಹಮದಾಬಾದ್ನ ಐಎನ್–ಎಸ್ಪಿಎಸಿಇ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ ಡಾ.ಪ್ರಫುಲ್ಲ ಕುಮಾರ್ ಜೈನ್ ಅವರು ದಯಾನಂದ ಸಾಗರ್ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೊ. ಆರ್. ಜನಾರ್ಧನ್ ಅವರಿಗೆ ಒಪ್ಪಂದ ಪತ್ರ ಹಸ್ತಾಂತರಿಸಿದರು. ಎಐಸಿ–ಡಿಸಿಯು ಸಿಇಒ ವಿನೋದ್ ಶಂಕರ್ ಇದ್ದರು.</p>
<p><strong>ಬೆಂಗಳೂರು</strong>: ವಿದ್ಯಾರ್ಥಿಗಳೇ ವಿನ್ಯಾಸಗೊಳಿಸಿರುವ ಉಪಗ್ರಹ ಡಿಎಸ್ಎಟಿ-1 ಉಡ್ಡಯನ ಮಾಡುವುದಕ್ಕೆ ದಯಾನಂದ ಸಾಗರ ವಿಶ್ವವಿದ್ಯಾಲಯ (ಡಿಎಸ್ಯು) ಮುಂದಾಗಿದೆ. ಇಸ್ರೊದ ಪಿಎಸ್ಎಲ್ವಿ–ಸಿ62 ರಾಕೆಟ್ ಬಳಸಿ ಈ ಉಪಗ್ರಹ ಉಡ್ಡಯನ ಮಾಡಲಾಗುತ್ತದೆ.</p>.<p>ಅಟಲ್ ಇನ್ನೊವೇಶನ್ ಸೆಂಟರ್– ದಯಾನಂದ ಸಾಗರ್ ವಿಶ್ವವಿದ್ಯಾಲಯ (ಎಐಸಿ–ಡಿಎಸ್ಯು) ನೆರವಿನಿಂದ ಈ ಉಪಗ್ರಹವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕೇಂದ್ರವನ್ನು ನೀತಿ ಆಯೋಗ ಒದಗಿಸಿರುವ ₹ 10 ಕೋಟಿ ಅನುದಾನದಿಂದ ಸ್ಥಾಪಿಸಲಾಗಿದೆ.</p>.<p>ಡಿಎಸ್ಎಟಿ ಉಪಗ್ರಹವು ಸಂವಹನಕ್ಕೆ ಸಂಬಂಧಿಸಿದಂತೆ ಹಲವು ವೈಶಿಷ್ಟ್ಯ (ವಿವಿಧ ತರಂಗಾಂತರ, ರೇಡಿಯೊ ಬ್ಯಾಂಡ್) ಒಳಗೊಂಡಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಸ್ಥಾಪಿಸಲಾಗಿರುವ ‘ಗ್ರೌಂಡ್ ಸ್ಟೇಷನ್’ನಿಂದ ಈ ಉಪಗ್ರಹಕ್ಕೆ ಸಂದೇಶವನ್ನು (ಎಸ್ಎಂಎಸ್) ಕಳುಹಿಸಲಾಗುತ್ತದೆ. ಈ ಸೌಲಭ್ಯವನ್ನು ಧ್ರುವ ಸ್ಪೇಸ್ ಸ್ಥಾಪಿಸಿದೆ. ಇದರಿಂದ ಕಡಿಮೆ ಬ್ಯಾಂಡ್ ವಿಡ್ತ್ ಮೂಲಕ ಸಂವಹನ ಸಾಧ್ಯವಾಗಲಿದೆ. ಉಡ್ಡಯನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು, ಪರೀಕ್ಷೆಗಳು ಪೂರ್ಣಗೊಳಿಸಲಾಗಿದೆ.</p>.<p>ವಿಶ್ವವಿದ್ಯಾಲಯದ ಕುಲಾಧಿಪತಿ ಹೇಮಚಂದ್ರ ಸಾಗರ್, ‘ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಶ್ರಮದ ಫಲವಾಗಿ ಡಿಎಸ್ಎಟಿ–1 ಉಡ್ಡಯನಕ್ಕೆ ಸಿದ್ಧಗೊಂಡಿದೆ. ಉಡಾವಣೆಗೆ ವೇದಿಕೆಯನ್ನು ಒದಗಿಸಿದ ಇಸ್ರೊ ಹಾಗೂ ಧ್ರುವ ಸ್ಪೇಸ್ಗೆ ಕೃತಜ್ಞರಾಗಿದ್ದೇವೆ. ಡಿಎಸ್ಎಟಿ–1 ಕರ್ನಾಟಕದ ದೂರದೃಷ್ಟಿಯ ‘ಅಂತರಿಕ್ಷ ನೀತಿ 2024–2029’ಗೆ ಸಾಕ್ಷಿಯಾಗಿ ನಿಂತಿದೆ’ ಎಂದು ತಿಳಿಸಿದರು. <br /><br />ಸಹ ಕುಲಾಧಿಪತಿ ಡಿ.ಪ್ರೇಮ್ಚಂದ್ರ ಸಾಗರ್, ‘ಉಡಾವಣೆಯ ಬಳಿಕ ವಿಶ್ವವಿದ್ಯಾಲಯದ ‘ಗ್ರೌಂಡ್ ಸ್ಟೇಷನ್’ನಿಂದ ಕಾರ್ಯಾಚರಣೆಗಳನ್ನು ವಿದ್ಯಾರ್ಥಿಗಳು ಸ್ವತಂತ್ರವಾಗಿ ನಿರ್ವಹಿಸಲಿದ್ದಾರೆ. ಈ ಅವಧಿಯಲ್ಲಿ ಸಂಗ್ರಹವಾಗುವ ದತ್ತಾಂಶವು ಉಪಗ್ರಹ ಸಂವಹನ, ಮಿಷನ್ ಕಾರ್ಯಾಚರಣೆಗಳು ಹಾಗೂ ಅಂತರಿಕ್ಷ ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ ನಡೆಸುತ್ತಿರುವ ನಿರಂತರ ಸಂಶೋಧನೆಗೆ ಸಹಕಾರಿಯಾಗಲಿದೆ’ ಎಂದರು.</p>.<p>ಅಹಮದಾಬಾದ್ನ ಐಎನ್–ಎಸ್ಪಿಎಸಿಇ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ ಡಾ.ಪ್ರಫುಲ್ಲ ಕುಮಾರ್ ಜೈನ್ ಅವರು ದಯಾನಂದ ಸಾಗರ್ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೊ. ಆರ್. ಜನಾರ್ಧನ್ ಅವರಿಗೆ ಒಪ್ಪಂದ ಪತ್ರ ಹಸ್ತಾಂತರಿಸಿದರು. ಎಐಸಿ–ಡಿಸಿಯು ಸಿಇಒ ವಿನೋದ್ ಶಂಕರ್ ಇದ್ದರು.</p>