<p><strong>ಬೆಂಗಳೂರು</strong>: ‘ಬೆಂಗಳೂರು ನಗರವು ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟವಾಗಿದೆ’ ಎಂದು ಆರ್ಚ್ ಬಿಷಪ್ ಪೀಟರ್ ಮಚಾಡೊ ಹೇಳಿದರು.</p>.<p>ಶ್ರೀರಾಮಪುರದಲ್ಲಿರುವ ‘ಭಾರತೀಯ ವಿದ್ಯಾಭವನ ಬಿಬಿಎಂಪಿ ಪಬ್ಲಿಕ್ ಶಾಲೆ’ಯಲ್ಲಿ ಭಾರತೀಯ ವಿದ್ಯಾಭವನ, ವಿವಿಧ ದಾನಿಗಳ ನೆರವಿನಿಂದ ನಿರ್ಮಿಸಿರುವ ‘ಸಂಭ್ರಮ ನೂತನ ಶಾಲಾ ಸಭಾಂಗಣ’ ಉದ್ಘಾಟಿಸಿ ಅವರು ಮಾತನಾಡಿದರು. </p>.<p>‘ಈ ಮಹಾನಗರ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಕ್ಕಷ್ಟೇ ಪ್ರಸಿದ್ಧಿಯಾಗಿಲ್ಲ. ಮಾನವತೆಗೂ ಹೆಸರುವಾಸಿಯಾಗಿದೆ’ ಎಂದರು.</p>.<p>ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಒಂದು ಕಾಲದಲ್ಲಿ ಕಲಿಕಾ ವಾತಾವರಣವೇ ಇರದಿದ್ದ ಈ ಶಾಲೆಯನ್ನು ಭಾರತೀಯ ವಿದ್ಯಾಭವನವು ದಾನಿಗಳ ಸಹಾಯದಿಂದ ಉತ್ತಮವಾಗಿ ರೂಪಿಸಿದೆ. ಇಲ್ಲಿ ಶೈಕ್ಷಣಿಕ ಗುಣಮಟ್ಟ ಉತ್ಕೃಷ್ಟವಾಗಿದೆ. ಪ್ರತಿವರ್ಷ ಹಲವರು ಈ ಶಾಲೆಯಲ್ಲಿ ಸೀಟು ಕೊಡಿಸಿ ಎಂದು ಒತ್ತಾಯಿಸುತ್ತಾರೆ’ ಎಂದು ಹೇಳಿದರು.</p>.<p>ವಿದ್ಯಾಭವನದ ಅಧ್ಯಕ್ಷ ವಕೀಲ ಕೆ.ಜಿ.ರಾಘವನ್ ಮಾತನಾಡಿ, ‘ಜೀವನದಲ್ಲಿ ಕೆಲವು ಅವಕಾಶಗಳು ಬರುತ್ತವೆ. ಅವುಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು. ಅವಕಾಶಗಳು ಸಮಾಜದ ಎಲ್ಲರಿಗೂ ಸಿಗುವಂತಾಗಬೇಕು’ ಎಂದು ಹೇಳಿದರು.<br /><br />ಇದೇ ವೇಳೆ, ಶಾಲೆಯ ಕೊಠಡಿ ಮತ್ತು ಸುಸಜ್ಜಿತ ಸಭಾಂಗಣ ನಿರ್ಮಿಸಲು ₹2 ಕೋಟಿ ನೀಡಿದ ಉದ್ಯಮಿ ಸಿ.ಜಿ.ಜಾರ್ಜ್ ಥಾಮಸ್ ಮತ್ತು ಸಹೋದರರು ಹಾಗೂ ವಾಸ್ತುಶಿಲ್ಪಿ ವಿಶ್ವನಾಥ್ ಅವರನ್ನು ಗೌರವಿಸಲಾಯಿತು.</p>.<p>ಬೌದ್ಧ, ಕ್ರೈಸ್ತ, ಜೈನ, ಇಸ್ಲಾಂ, ಸಿಖ್ ಮತ್ತು ಹಿಂದೂ ಧಾರ್ಮಿಕ ಮುಖಂಡರು ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾಭವನದ ನಿರ್ದೇಶಕ ಎಚ್. ಎನ್. ಸುರೇಶ್ ವಂದಿಸಿದರು. ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ.ರಾವ್, ಕೆ. ಜೈರಾಜ್, ಅಭಿನವ ರವಿಕುಮಾರ್, ಸೀತಾರಾಮಚಂದ್ರ, ಕಮಲ್ಪಂತ್, ಖಜಾಂಚಿ ಪೀಯೂಶ್ ಜೈನ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಬೆಂಗಳೂರು ನಗರವು ಕುವೆಂಪು ಅವರ ಆಶಯದಂತೆ ಸರ್ವಜನಾಂಗದ ಶಾಂತಿಯ ತೋಟವಾಗಿದೆ’ ಎಂದು ಆರ್ಚ್ ಬಿಷಪ್ ಪೀಟರ್ ಮಚಾಡೊ ಹೇಳಿದರು.</p>.<p>ಶ್ರೀರಾಮಪುರದಲ್ಲಿರುವ ‘ಭಾರತೀಯ ವಿದ್ಯಾಭವನ ಬಿಬಿಎಂಪಿ ಪಬ್ಲಿಕ್ ಶಾಲೆ’ಯಲ್ಲಿ ಭಾರತೀಯ ವಿದ್ಯಾಭವನ, ವಿವಿಧ ದಾನಿಗಳ ನೆರವಿನಿಂದ ನಿರ್ಮಿಸಿರುವ ‘ಸಂಭ್ರಮ ನೂತನ ಶಾಲಾ ಸಭಾಂಗಣ’ ಉದ್ಘಾಟಿಸಿ ಅವರು ಮಾತನಾಡಿದರು. </p>.<p>‘ಈ ಮಹಾನಗರ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನಕ್ಕಷ್ಟೇ ಪ್ರಸಿದ್ಧಿಯಾಗಿಲ್ಲ. ಮಾನವತೆಗೂ ಹೆಸರುವಾಸಿಯಾಗಿದೆ’ ಎಂದರು.</p>.<p>ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಒಂದು ಕಾಲದಲ್ಲಿ ಕಲಿಕಾ ವಾತಾವರಣವೇ ಇರದಿದ್ದ ಈ ಶಾಲೆಯನ್ನು ಭಾರತೀಯ ವಿದ್ಯಾಭವನವು ದಾನಿಗಳ ಸಹಾಯದಿಂದ ಉತ್ತಮವಾಗಿ ರೂಪಿಸಿದೆ. ಇಲ್ಲಿ ಶೈಕ್ಷಣಿಕ ಗುಣಮಟ್ಟ ಉತ್ಕೃಷ್ಟವಾಗಿದೆ. ಪ್ರತಿವರ್ಷ ಹಲವರು ಈ ಶಾಲೆಯಲ್ಲಿ ಸೀಟು ಕೊಡಿಸಿ ಎಂದು ಒತ್ತಾಯಿಸುತ್ತಾರೆ’ ಎಂದು ಹೇಳಿದರು.</p>.<p>ವಿದ್ಯಾಭವನದ ಅಧ್ಯಕ್ಷ ವಕೀಲ ಕೆ.ಜಿ.ರಾಘವನ್ ಮಾತನಾಡಿ, ‘ಜೀವನದಲ್ಲಿ ಕೆಲವು ಅವಕಾಶಗಳು ಬರುತ್ತವೆ. ಅವುಗಳನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕು. ಅವಕಾಶಗಳು ಸಮಾಜದ ಎಲ್ಲರಿಗೂ ಸಿಗುವಂತಾಗಬೇಕು’ ಎಂದು ಹೇಳಿದರು.<br /><br />ಇದೇ ವೇಳೆ, ಶಾಲೆಯ ಕೊಠಡಿ ಮತ್ತು ಸುಸಜ್ಜಿತ ಸಭಾಂಗಣ ನಿರ್ಮಿಸಲು ₹2 ಕೋಟಿ ನೀಡಿದ ಉದ್ಯಮಿ ಸಿ.ಜಿ.ಜಾರ್ಜ್ ಥಾಮಸ್ ಮತ್ತು ಸಹೋದರರು ಹಾಗೂ ವಾಸ್ತುಶಿಲ್ಪಿ ವಿಶ್ವನಾಥ್ ಅವರನ್ನು ಗೌರವಿಸಲಾಯಿತು.</p>.<p>ಬೌದ್ಧ, ಕ್ರೈಸ್ತ, ಜೈನ, ಇಸ್ಲಾಂ, ಸಿಖ್ ಮತ್ತು ಹಿಂದೂ ಧಾರ್ಮಿಕ ಮುಖಂಡರು ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾಭವನದ ನಿರ್ದೇಶಕ ಎಚ್. ಎನ್. ಸುರೇಶ್ ವಂದಿಸಿದರು. ಜಂಟಿ ನಿರ್ದೇಶಕಿ ನಾಗಲಕ್ಷ್ಮೀ ಕೆ.ರಾವ್, ಕೆ. ಜೈರಾಜ್, ಅಭಿನವ ರವಿಕುಮಾರ್, ಸೀತಾರಾಮಚಂದ್ರ, ಕಮಲ್ಪಂತ್, ಖಜಾಂಚಿ ಪೀಯೂಶ್ ಜೈನ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>