ಎಸ್.ಆರ್.ಪಾಟೀಲ ಅವರು ‘ಪ್ರಜಾವಾಣಿ’ಯಲ್ಲಿ ಇದೇ 15ರಂದು ಪ್ರಕಟವಾದ ‘ಖಾದ್ಯ ತೈಲದಲ್ಲೂ ವಿಷ’ ಸುದ್ದಿಯನ್ನು ಉಲ್ಲೇಖಿಸಿ, ಇಡೀ ರಾಜ್ಯದಲ್ಲಿ ನಾವು ಸೇವಿಸುವ ಎಣ್ಣೆ, ಆಹಾರ, ಹಾಲು, ಹಣ್ಣು ಕಲಬೆರೆಕೆಯಾಗಿ, ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದೆ, ಮಾದಕ ವಸ್ತು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳುವ ರೀತಿಯಲ್ಲಿ ಕಲಬೆರಕೆ ದಂಧೆಯಲ್ಲಿ ತೊಡಗಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.