‘ಹೊಸಕೋಟೆ ಟೋಲ್ ಬಳಿ ಇರುವ ಎಂ.ವಿ.ಜೆ. ಕಾಲೇಜು ಆವರಣದಿಂದ ರ್ಯಾಲಿ ಆರಂಭವಾಗಲಿದೆ. ಪೌರಾಡಳಿತ ಎಂ.ಟಿ.ಬಿ.ನಾಗರಾಜ್ ಚಾಲನೆ ನೀಡುವರು. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಕ್ಯಾಪ್ಟನ್ ನವೀನ್ ನಾಗಪ್ಪ, ಮಹಿಳಾ ಸೇನಾಧಿಕಾರಿ ಸ್ವಾತಿ ಬಸೇಡಿಯಾ ಪಾಲ್ಗೊಳ್ಳುವರು’ ಎಂದು ಸಂಸ್ಥೆಯ ಸಂಸ್ಥಾಪಕಿ ಹರ್ಷಿಣಿ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.