‘ಬಿಜೆಪಿಯವರು ಬೀಗುತ್ತಿದ್ದಾರೆ. ಯಡಿಯೂರಪ್ಪ ಕನಸು ನನಸಾಗುವುದಿಲ್ಲ. ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಬೇಕು ಎಂದುಕೊಂಡಿದ್ದಾರೆ. ಆದರೆ, ಅವರ ಸಾಧನೆ ಯಶಸ್ವಿ ಆಗುವುದಿಲ್ಲ. ಬಿಜೆಪಿಯ ಕೀಳು ಮಟ್ಟದ ರಾಜಕಾರಣ ಅಂತ್ಯವಾಗಲಿದೆ’ ಎಂದು ಬಿಜೆಪಿ ನಾಯಕರ ಹೇಳಿಕೆಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದರು.‘ರಾಹುಲ್ ಗಾಂಧಿ ಪೌರತ್ವ ಪ್ರಶ್ನೆ ಮಾಡುವ ನೀಚ ರಾಜಕಾರಣ ಅವರದ್ದು. ಕರ್ನಾಟಕಕ್ಕೆ ನೆಮ್ಮದಿ ಕೊಡುವ ಫಲಿತಾಂಶ ಈ ಚುನಾವಣೆಯಿಂದ ತಿಳಿಯಲಿದೆ. ಬಿಜೆಪಿಯ ಕೆಟ್ಟ ರಾಜಕಾರಣ ಕೊನೆಗೊಳ್ಳಲಿದೆ’ ಎಂದರು.