<p>ದಾಬಸ್ ಪೇಟೆ: ವರ್ಷದ ಮೊದಲ ದಿನವಾದ ಸೋಮವಾರ ನೆಲಮಂಗಲ ತಾಲ್ಲೂಕಿನ ಯಾತ್ರಾ ಸ್ಥಳ ಶಿವಗಂಗೆ ಬೆಟ್ಟದಲ್ಲಿ ಭಕ್ತರಿಂದ ತುಂಬಿ ಹೋಗಿತ್ತು.</p>.<p>ಹೊಸ ವರ್ಷದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತಾ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಡಿ.30 ರ ಸಂಜೆ 6ರಿಂದ ಜ.1ರ ಮಧ್ಯರಾತ್ರಿ 12ರ ವರೆಗೆ ಶಿವಗಂಗೆ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.</p>.<p>ಆದರೆ ಸೋಮವಾರ ಬೆಳಿಗ್ಗಿನಿಂದಲೇ ಪ್ರವಾಸಿಗರು ಬೆಟ್ಟಕ್ಕೆ ಆಗಮಿಸಿದರು. 25 ಸಾವಿರಕ್ಕೂ ಹೆಚ್ಚು ಭಕ್ತರು ಶಿವಗಂಗಾ ಕ್ಷೇತ್ರಕ್ಕೆ ಭೇಟಿ ನೀಡಿದರು.</p>.<p>ಹೊಸ ವರ್ಷದ ಪ್ರಯುಕ್ತ ಇಲ್ಲಿನ ಮೂಲ ದೇವರಾದ ಗಂಗಾಧರೇಶ್ವರ ಸ್ವಾಮಿಗೆ ವಿಶೇಷವಾದ ಅಲಂಕಾರವನ್ನು ಮಾಡಲಾಗಿತ್ತು. ಭಕ್ತರು ಕೇವಲ ಗಂಗಾಧರೇಶ್ವರ, ಹೊನ್ನಾದೇವಿ, ದೊಡ್ಡಗಣಪಗೆ ಪೂಜೆ ಸಲ್ಲಿಸಿದರು. ಪಾತಾಳ ಗಂಗೆಯ ದರ್ಶನ ಮಾತ್ರ ಪಡೆದರು.</p>.<p>ಕಾರ್ಯನಿರ್ವಹಣಾಧಿಕಾರಿ ಕೆ.ರಮ್ಯ, ಪಾರುಪತ್ತೇದಾರ್ ಎಸ್. ಸುಮಾ. ಪ್ರಧಾನ ಅರ್ಚಕರಾದ ಎಸ್.ಕೆ. ಶ್ಯಾಮ್ ಪ್ರಸಾದ್ ದೀಕ್ಷಿತ್ ಮತ್ತು ತಂಡ ಪೂಜಾ ಕಾರ್ಯಗಳನ್ನು ನೇರವೇರಿಸಿತು.</p>.<p>ಪೊಲೀಸ್ ಅಧಿಕಾರಿಗಳಾದ ಬಿ.ರಾಜು, ವಿಜಯಕುಮಾರಿ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾಬಸ್ ಪೇಟೆ: ವರ್ಷದ ಮೊದಲ ದಿನವಾದ ಸೋಮವಾರ ನೆಲಮಂಗಲ ತಾಲ್ಲೂಕಿನ ಯಾತ್ರಾ ಸ್ಥಳ ಶಿವಗಂಗೆ ಬೆಟ್ಟದಲ್ಲಿ ಭಕ್ತರಿಂದ ತುಂಬಿ ಹೋಗಿತ್ತು.</p>.<p>ಹೊಸ ವರ್ಷದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತಾ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಡಿ.30 ರ ಸಂಜೆ 6ರಿಂದ ಜ.1ರ ಮಧ್ಯರಾತ್ರಿ 12ರ ವರೆಗೆ ಶಿವಗಂಗೆ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.</p>.<p>ಆದರೆ ಸೋಮವಾರ ಬೆಳಿಗ್ಗಿನಿಂದಲೇ ಪ್ರವಾಸಿಗರು ಬೆಟ್ಟಕ್ಕೆ ಆಗಮಿಸಿದರು. 25 ಸಾವಿರಕ್ಕೂ ಹೆಚ್ಚು ಭಕ್ತರು ಶಿವಗಂಗಾ ಕ್ಷೇತ್ರಕ್ಕೆ ಭೇಟಿ ನೀಡಿದರು.</p>.<p>ಹೊಸ ವರ್ಷದ ಪ್ರಯುಕ್ತ ಇಲ್ಲಿನ ಮೂಲ ದೇವರಾದ ಗಂಗಾಧರೇಶ್ವರ ಸ್ವಾಮಿಗೆ ವಿಶೇಷವಾದ ಅಲಂಕಾರವನ್ನು ಮಾಡಲಾಗಿತ್ತು. ಭಕ್ತರು ಕೇವಲ ಗಂಗಾಧರೇಶ್ವರ, ಹೊನ್ನಾದೇವಿ, ದೊಡ್ಡಗಣಪಗೆ ಪೂಜೆ ಸಲ್ಲಿಸಿದರು. ಪಾತಾಳ ಗಂಗೆಯ ದರ್ಶನ ಮಾತ್ರ ಪಡೆದರು.</p>.<p>ಕಾರ್ಯನಿರ್ವಹಣಾಧಿಕಾರಿ ಕೆ.ರಮ್ಯ, ಪಾರುಪತ್ತೇದಾರ್ ಎಸ್. ಸುಮಾ. ಪ್ರಧಾನ ಅರ್ಚಕರಾದ ಎಸ್.ಕೆ. ಶ್ಯಾಮ್ ಪ್ರಸಾದ್ ದೀಕ್ಷಿತ್ ಮತ್ತು ತಂಡ ಪೂಜಾ ಕಾರ್ಯಗಳನ್ನು ನೇರವೇರಿಸಿತು.</p>.<p>ಪೊಲೀಸ್ ಅಧಿಕಾರಿಗಳಾದ ಬಿ.ರಾಜು, ವಿಜಯಕುಮಾರಿ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>