ಬಾಗಲಕೋಟೆಯ ಸಿದ್ದಾಪುರ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಇದ್ದರೂ ನೇಕಾರರು ನಿರಂತರ ವಿದ್ಯುತ್ ಕಡಿತದ ಸಮಸ್ಯೆಯನ್ನು ಎದುರಿಸು
ತ್ತಿದ್ದರು. ದಿನಕ್ಕೆ 12 ಗಂಟೆ ದುಡಿಯುವ ನೇಕಾರರು, ₹600 ದಿನಗೂಲಿ ಪಡೆಯುತ್ತಾರೆ. ವಿದ್ಯುತ್ ಕಡಿತದಿಂದಾಗಿ ಉತ್ಪಾದನೆಯೂ ಕುಂಠಿತವಾಗಿ, ಆದಾಯದಲ್ಲೂ ಇಳಿಮುಖವಾಗಿ, ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿತ್ತು. ನೇಕಾರರ ಸಮಸ್ಯೆಗಳನ್ನು ಮನಗಂಡಸಂಸ್ಥೆ ಸೌರ ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಕಲ್ಪಿಸಿದೆ. ಇದರಿಂದ ಯಾವುದೇ ಅಡೆತಡೆಗಳಿಲ್ಲದೆ ನೌಕರರು 12 ಗಂಟೆ ನಿರಂತರವಾಗಿ ಕೆಲಸ ಮಾಡಬಹುದಾಗಿದೆ.