ಬೆಂಗಳೂರು: ‘ನಗರಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ’ ಎಂಬುದಾಗಿ ವದಂತಿ ಹರಡುತ್ತಿದ್ದು, ಆ ಸಂಬಂಧ ಪೊಲೀಸ್ ಕಮಿಷನರ್ ಅಲೋಕ್ಕುಮಾರ್ ಶನಿವಾರ ಟ್ವೀಟ್ ಮಾಡಿದ್ದಾರೆ.
‘ಮಕ್ಕಳ ಅಪಹರಣ ಸಂಬಂಧ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇಂಥ ಸುದ್ದಿಗಳನ್ನು ಸಾರ್ವಜನಿಕರು ನಂಬಬಾರದು. ಯಾವುದೇ ಸುದ್ದಿ ಇದ್ದರೂ ಫಾರ್ವರ್ಡ್ ಮಾಡುವ ಮುನ್ನ ಪರಿಶೀಲಿಸಬೇಕು’ ಎಂದು ಅಲೋಕ್ಕುಮಾರ್ ಹೇಳಿದ್ದಾರೆ.
Some people are spreading rumours regarding child kidnapping . Members of public are requested to cross check the veracity of such messages before circulating it. Rumour mongers will be punished as per the provisions of law.