ಮಾನವೀಯತೆ ಮರೆತ ಅಧಿಕಾರಿಗಳು: ಕುರಿಗಾಹಿಯು ಸತ್ತ ಕುರಿಗಳನ್ನು ₹2ಸಾವಿರ, ₹3ಸಾವಿರಕ್ಕೆ ಮಾರಾಟ ಮಾಡಿ ನಷ್ಟ ಕಡಿಮೆ ಮಾಡಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ರೈಲ್ವೆ ಅಧಿಕಾರಿಗಳು, ಕುರಿಗಾಹಿಯನ್ನು ಬೆದರಿಸಿ ಕೆಲವು ಕುರಿ ತೆಗೆದುಕೊಂಡು ಹೋಗುತ್ತಿರುವುದನ್ನು ಕಂಡು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.