‘ರಾಜ್ಯ ಸರ್ಕಾರ, ಆರ್ಬಿಐ ಹಾಗೂ ಇತರೆ ಸಂಸ್ಥೆಗಳು ಬ್ಯಾಂಕ್ ವಹಿವಾಟು ಪರಿಶೀಲಿಸಿ, ಗ್ರಾಹಕರ ನಂಬಿಕೆಯ ಬ್ಯಾಂಕ್ ಎಂದು ಪ್ರಮಾಣ ಪತ್ರ ಸಮೇತ ಕೊಂಡಾಡಿದ್ದವು. ಅದನ್ನು ನಂಬಿ ಲಕ್ಷಾಂತರ ರೂಪಾಯಿ ಹಣವನ್ನು ಬ್ಯಾಂಕ್ನಲ್ಲಿ ಠೇವಣಿ ಇರಿಸಲಾಗಿತ್ತು. ಈಗ ಎಲ್ಲರೂ ಬೀದಿಗೆ ಬಂದಿದ್ದೇವೆ’ ಎಂದೂ ಠೇವಣಿದಾರರು ಹೇಳಿದರು.