<p><strong>ರಾಜರಾಜೇಶ್ವರಿನಗರ</strong>: ‘ರೋಟರಿ ಸಂಸ್ಥೆಯು ನಿಸ್ವಾರ್ಥ ಸೇವೆಯ ಮೂಲಕ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ, ಪ್ರಗತಿಪರವಾದ ಸಮಾಜದ ನಿರ್ಮಾಣಕ್ಕೆ ಬದ್ಧವಾಗಿದೆ’ ಎಂದು ರೋಟರಿ ಬೆಂಗಳೂರು ಜಿಲ್ಲಾ ಸಮಿತಿ ನಿರ್ದೇಶಕ ಕೆ.ಟಿ.ನಿರಂಜನ್ ತಿಳಿಸಿದರು.</p>.<p>ಹೇರೋಹಳ್ಳಿಯಲ್ಲಿ ನಡೆದ ರೋಟರಿ ಬೆಂಗಳೂರು ವಿಶ್ವನೀಡಂ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕೋವಿಡ್ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಶಿಕ್ಷಣ ಪಡೆಯಲು ಪರದಾಡುತ್ತಿದ್ದರು. ಇದನ್ನು ಮನಗಂಡು ಸಂಸ್ಥೆಯುಉಚಿತವಾಗಿ ಟ್ಯಾಬ್ ವಿತರಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ’ ಎಂದರು.</p>.<p>ನಿಯೋಜಿತ ಜಿಲ್ಲಾ ಪಾಲಕ ಜಿತೇಂದ್ರ ಅಣೀಜ,‘ಎಲ್ಲರೂ ಒಗ್ಗೂಡಿ ಸಮಾಜ ಕಟ್ಟುವ ಕೆಲಸ ಮಾಡಬೇಕು. ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಿಗಬೇಕು’ ಎಂದು ಹೇಳಿದರು.</p>.<p>ವಿಶ್ವನೀಡಂ ರೋಟರಿಯ ನೂತನ ಅಧ್ಯಕ್ಷ ಸತೀಶ್,‘ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಗುರುತಿಸಿ, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು’ ಎಂದರು.</p>.<p>ನೂತನ ಪದಾಧಿಕಾರಿಗಳಾಗಿ ಡಿ.ಎಂ.ಮಲ್ಲಿಕಾರ್ಜುನ್ (ಕಾರ್ಯದರ್ಶಿ), ಡಿ.ಕೆ. ಮೂರ್ತಿ (ಖಜಾಂಚಿ), ಓಂಕಾರ್ ಮೂರ್ತಿ (ಉಪಾಧ್ಯಕ್ಷ) ಹಾಗೂ ಶಶಿಧರ್, ಚಂದ್ರಶೇಖರ್, ಮಲ್ಲಿಕಾರ್ಜುನ್, ಪರಮೇಶ್ ಗೌಡ, ಭರಣಿ ನಿರಂಜನ್, ಯತೀಂದ್ರ, ರಮಣ, ರವಿಕುಮಾರ್, ಭಾವನಾ ಸತೀಶ್, ಗೀತಾಮಣಿ, ಸುಮ, ಶಶಿಧರ್, ಕವಿತಾ ಓಂಕಾರ್ ಅಧಿಕಾರ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ</strong>: ‘ರೋಟರಿ ಸಂಸ್ಥೆಯು ನಿಸ್ವಾರ್ಥ ಸೇವೆಯ ಮೂಲಕ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ, ಪ್ರಗತಿಪರವಾದ ಸಮಾಜದ ನಿರ್ಮಾಣಕ್ಕೆ ಬದ್ಧವಾಗಿದೆ’ ಎಂದು ರೋಟರಿ ಬೆಂಗಳೂರು ಜಿಲ್ಲಾ ಸಮಿತಿ ನಿರ್ದೇಶಕ ಕೆ.ಟಿ.ನಿರಂಜನ್ ತಿಳಿಸಿದರು.</p>.<p>ಹೇರೋಹಳ್ಳಿಯಲ್ಲಿ ನಡೆದ ರೋಟರಿ ಬೆಂಗಳೂರು ವಿಶ್ವನೀಡಂ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕೋವಿಡ್ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಶಿಕ್ಷಣ ಪಡೆಯಲು ಪರದಾಡುತ್ತಿದ್ದರು. ಇದನ್ನು ಮನಗಂಡು ಸಂಸ್ಥೆಯುಉಚಿತವಾಗಿ ಟ್ಯಾಬ್ ವಿತರಿಸಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ’ ಎಂದರು.</p>.<p>ನಿಯೋಜಿತ ಜಿಲ್ಲಾ ಪಾಲಕ ಜಿತೇಂದ್ರ ಅಣೀಜ,‘ಎಲ್ಲರೂ ಒಗ್ಗೂಡಿ ಸಮಾಜ ಕಟ್ಟುವ ಕೆಲಸ ಮಾಡಬೇಕು. ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಿಗಬೇಕು’ ಎಂದು ಹೇಳಿದರು.</p>.<p>ವಿಶ್ವನೀಡಂ ರೋಟರಿಯ ನೂತನ ಅಧ್ಯಕ್ಷ ಸತೀಶ್,‘ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳನ್ನು ಗುರುತಿಸಿ, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುವುದು’ ಎಂದರು.</p>.<p>ನೂತನ ಪದಾಧಿಕಾರಿಗಳಾಗಿ ಡಿ.ಎಂ.ಮಲ್ಲಿಕಾರ್ಜುನ್ (ಕಾರ್ಯದರ್ಶಿ), ಡಿ.ಕೆ. ಮೂರ್ತಿ (ಖಜಾಂಚಿ), ಓಂಕಾರ್ ಮೂರ್ತಿ (ಉಪಾಧ್ಯಕ್ಷ) ಹಾಗೂ ಶಶಿಧರ್, ಚಂದ್ರಶೇಖರ್, ಮಲ್ಲಿಕಾರ್ಜುನ್, ಪರಮೇಶ್ ಗೌಡ, ಭರಣಿ ನಿರಂಜನ್, ಯತೀಂದ್ರ, ರಮಣ, ರವಿಕುಮಾರ್, ಭಾವನಾ ಸತೀಶ್, ಗೀತಾಮಣಿ, ಸುಮ, ಶಶಿಧರ್, ಕವಿತಾ ಓಂಕಾರ್ ಅಧಿಕಾರ ಸ್ವೀಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>