ಬೆಂಗಳೂರು: ಭೈರವೇಶ್ವರನಗರದಲ್ಲಿ ವಿದ್ಯಾರ್ಥಿ ಶ್ರೇಯಸ್ (16) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಟೊ ಚಾಲಕ ಸಿದ್ದಪ್ಪ ಮತ್ತು ಖಾಸಗಿ ಶಾಲಾ ಶಿಕ್ಷಕಿ ನಳಿನಾ ಅವರ ಪುತ್ರ ಶ್ರೇಯಸ್, ಬಾಗಲಗುಂಟೆಯ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ.
ಶುಕ್ರವಾರ ಬೆಳಿಗ್ಗೆ ತಂದೆ ಆಟೊದಲ್ಲಿ ಬಾಡಿಗೆಗೆ ಹೋಗಿದ್ದರೆ, ತಾಯಿ ಶಾಲೆಗೆ ತೆರಳಿದ್ದರು. ಶ್ರೇಯಸ್ ಮನೆಯಲ್ಲೇ ಉಳಿದಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆ 5ಕ್ಕೆ ತಾಯಿ ಮನೆಗೆ ಮರಳಿದಾಗ ಆತ್ಮಹತ್ಯೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
‘ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಪೋಷಕರಿಂದಲೂ ಮಾಹಿತಿ ಪಡೆದುಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು. ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.