ಪೀಣ್ಯದ ‘ನಮ್ಮ ಮೆಟ್ರೊ’ ನಿಲ್ದಾಣದ ಸಮೀಪ ಸಿಂಗಪುರ ಚೆರ್ರಿ ಮರವೊಂದನ್ನು ಕಡಿಯಲಾಗಿದೆ. ಈ ಮರದಲ್ಲಿ ವಾಸವಿದ್ದ ಹಕ್ಕಿಯೊಂದು ರಸ್ತೆಯಲ್ಲಿ ಬಿದ್ದು ನರಳಾಡುವ ದೃಶ್ಯವನ್ನು ಕಂಡ ವಿದ್ಯಾರ್ಥಿ ಹೇಮಂತ್ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದ್ದರು. ಅವರು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಪ್ರಸನ್ನ ಕುಮಾರ್ ಅವರ ಮೊಬೈಲ್ ಸಂಖ್ಯೆಯನ್ನು ನೀಡಿದ್ದರು. ವಿದ್ಯಾರ್ಥಿಯು ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪ್ರಸನ್ನ, ಆ ಹಕ್ಕಿಗೆ ಪ್ರಥಮ ಚಿಕಿತ್ಸೆ ನೀಡಿದರು.