ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದು ಸುಸ್ತಾದ ವಿದ್ಯಾರ್ಥಿಗಳು

Last Updated 6 ಜುಲೈ 2020, 19:17 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್‌ಇಆರ್‌ಟಿ) ವತಿಯಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಸೋಮವಾರ ಬೆಳಿಗ್ಗೆಯಿಂದ ಪಾಠಗಳು ಪ್ರಸಾರವಾಗುತ್ತವೆ ಎಂದು ನಂಬಿದ ಸಾವಿರಾರು ಮಂದಿ ಚಂದನದ ಮುಂದೆ ಕಾದುಕುಳಿತು ಸುಸ್ತಾದರು. ಆದರೆ, ಪಾಠವೇ ಬಿತ್ತರವಾಗಲಿಲ್ಲ.

ಸೋಮವಾರ ಬೆಳಿಗ್ಗೆ 9.30ರಿಂದ 10 ಗಂಟೆಯವರೆಗೆ ಗಣಿತ, 10ರಿಂದ ಇಂಗ್ಲಿಷ್, 10.30ರಿಂದ ವಿಜ್ಞಾನ.. ಹೀಗೆ ಸಂಜೆ 5 ಗಂಟೆಯವರೆಗೆ ಪಾಠ ನಡೆಯಲಿದೆ ಎಂದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಇದು ರಾಜ್ಯವ್ಯಾಪಿ ಶಾಲೆಗಳಿಗೆ ತಲುಪಿ, ಪೋಷಕರನ್ನೂ ತಲುಪಿತ್ತು. ಆದರೆ ಬೆಳಿಗ್ಗೆ 9.30 ಕಳೆದರೂ ಪಾಠಗಳ ಪ್ರಸಾರ ಆರಂಭವಾಗಲಿಲ್ಲ.

‘ಕಾರ್ಯಕ್ರಮದ ವೇಳಾಪಟ್ಟಿ ಸಿದ್ಧವಾಗಿತ್ತು. ಆದರೆ ಶಿಕ್ಷಣ ಇಲಾಖೆ ಒಪ್ಪಿಗೆ ಪಡೆದಿರಲಿಲ್ಲ, ಅಷ್ಟರಲ್ಲೇ ಯಾರೋ ವೇಳಾಪಟ್ಟಿಯನ್ನು ಯೂಟ್ಯೂಬ್‌ಗೆ ಹಾಕಿದ್ದರಿಂದ ಗೊಂದಲ ಉಂಟಾಗಿದೆ’ ಎಂದು ಡಿಎಸ್‌ಇಆರ್‌ಟಿ ನಿರ್ದೇಶಕ ಎಂ.ಆರ್.ಮಾರುತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT