<p><strong>ಬೆಂಗಳೂರು: </strong>ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ನೀಡುವಲ್ಲಿ ಆಗಿರುವ ವಂಚನೆ ಪ್ರಕರಣದಲ್ಲಿ ಬಿಬಿಎಂಪಿಯ ಸಹಾಯಕ ಎಂಜಿನಿಯರ್ ಎಂ.ಎನ್.ದೇವರಾಜ್ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿದೆ.</p>.<p>ಫ್ರಾನ್ಸಿಸ್ ಸ್ಯಾಮ್ರಾಜ್ ಎಂಬುವರಿಗೆ ಸೇರಬೇಕಾದ ಜಾಗಕ್ಕೆ ಕಾನೂನುಬಾಹಿರವಾಗಿ ಅಕ್ಕಪ್ಪ ಎಂಬುವರಿಗೆ ಟಿಡಿಆರ್ ನೀಡಿದ ಆರೋಪ ದೇವರಾಜ್ ಮೇಲಿದೆ. ದೇವರಾಜ್ ಪ್ರಸ್ತುತ ಪಾಲಿಕೆಯ ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ.</p>.<p>ಈ ಪ್ರಕರಣದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸ್ಯಾಮ್ರಾಜ್ ದೂರು ನೀಡಿದ್ದರು. ಮಹದೇವಪುರ ವಲಯದ ಸಹಾಯಕ ಎಂಜಿನಿಯರ್ ಆಗಿದ್ದ ದೇವರಾಜ್ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಮಗ್ರ ತನಿಖೆಗೆ ಅನುಮತಿ ನೀಡುವಂತೆ ಎಸಿಬಿ ಕೋರಿತ್ತು.</p>.<p>ಏನಿದು ಪ್ರಕರಣ: ಕೆ.ಆರ್.ಪುರ ಹೋಬಳಿಯ ಕಲ್ಕೆರೆ ಗ್ರಾಮದ ಸರ್ವೆ ಸಂಖ್ಯೆ 576ರ 1 ಎಕರೆ 14 ಗುಂಟೆ ಜಾಗವನ್ನು ಫ್ರಾನ್ಸಿಸ್ ಸ್ಯಾಮ್ರಾಜ್ ಅವರು ದಾಸಪ್ಪ ಎಂಬುವರಿಂದ (ಎಂ.ಆರ್.ನಂಬರ್ 28/94–95) ಖರೀದಿಸಿದ್ದರು. ಕೆ.ಆರ್.ಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 2005ರಲ್ಲಿ ನೋಂದಣಿಯಾಗಿತ್ತು.</p>.<p>ಬಳಿಕ ತಂದೆ ಅನಾರೋಗ್ಯಪೀಡಿತರಾಗಿದ್ದರಿಂದ ಫ್ರಾನ್ಸಿಸ್ ಅವರು ಹೊಸೂರಿನಲ್ಲಿ ವಾಸವಾಗಿದ್ದರು. ಈ ನಡುವೆ, ಚನ್ನಸಂದ್ರದಿಂದ ಹೆಣ್ಣೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಪಾಲಿಕೆ ಮುಂದಾಗಿತ್ತು. ಈ ವೇಳೆ,<br />ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡಲು ತೀರ್ಮಾನಿಸಿತ್ತು. ಅಕ್ಕಪ್ಪ ಎಂಬುವರು ಸರ್ವೆ ಸಂಖ್ಯೆ 576ರಲ್ಲಿ 03.02 ಗುಂಟೆ ಜಮೀನು ಹೊಂದಿದ್ದು, ಈ ಜಾಗದಲ್ಲಿ 15 ಅಡಿ ಮಾತ್ರ ರಸ್ತೆಗೆ ಉಪಯೋಗವಾಗಿರುತ್ತದೆ. ಆದರೆ,<br />ಅಕ್ಕಪ್ಪ ಅವರು ಎಂ.ಎನ್.ದೇವರಾಜ್ ಅವರ ಸಹಾಯ ಪಡೆದು ಫ್ರಾನ್ಸಿಸ್ ಅವರಿಗೆ ಸೇರಿದ ಜಮೀನನ್ನು ಸೇರಿಸಿಕೊಂಡು ಒಟ್ಟು 7.14 ಗುಂಟೆ ಜಮೀನಿಗೆ (722.50 ಚದರ ಮೀಟರ್) ಹಾಗೂ ಆ ಜಾಗದಲ್ಲಿ ನಿರ್ಮಿಸಿದ ಕಟ್ಟಡಕ್ಕೆ (2463.26 ಚದರ ಮೀಟರ್) ಟಿಡಿಆರ್ ಪಡೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ನೀಡುವಲ್ಲಿ ಆಗಿರುವ ವಂಚನೆ ಪ್ರಕರಣದಲ್ಲಿ ಬಿಬಿಎಂಪಿಯ ಸಹಾಯಕ ಎಂಜಿನಿಯರ್ ಎಂ.ಎನ್.ದೇವರಾಜ್ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿದೆ.</p>.<p>ಫ್ರಾನ್ಸಿಸ್ ಸ್ಯಾಮ್ರಾಜ್ ಎಂಬುವರಿಗೆ ಸೇರಬೇಕಾದ ಜಾಗಕ್ಕೆ ಕಾನೂನುಬಾಹಿರವಾಗಿ ಅಕ್ಕಪ್ಪ ಎಂಬುವರಿಗೆ ಟಿಡಿಆರ್ ನೀಡಿದ ಆರೋಪ ದೇವರಾಜ್ ಮೇಲಿದೆ. ದೇವರಾಜ್ ಪ್ರಸ್ತುತ ಪಾಲಿಕೆಯ ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ.</p>.<p>ಈ ಪ್ರಕರಣದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸ್ಯಾಮ್ರಾಜ್ ದೂರು ನೀಡಿದ್ದರು. ಮಹದೇವಪುರ ವಲಯದ ಸಹಾಯಕ ಎಂಜಿನಿಯರ್ ಆಗಿದ್ದ ದೇವರಾಜ್ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಮಗ್ರ ತನಿಖೆಗೆ ಅನುಮತಿ ನೀಡುವಂತೆ ಎಸಿಬಿ ಕೋರಿತ್ತು.</p>.<p>ಏನಿದು ಪ್ರಕರಣ: ಕೆ.ಆರ್.ಪುರ ಹೋಬಳಿಯ ಕಲ್ಕೆರೆ ಗ್ರಾಮದ ಸರ್ವೆ ಸಂಖ್ಯೆ 576ರ 1 ಎಕರೆ 14 ಗುಂಟೆ ಜಾಗವನ್ನು ಫ್ರಾನ್ಸಿಸ್ ಸ್ಯಾಮ್ರಾಜ್ ಅವರು ದಾಸಪ್ಪ ಎಂಬುವರಿಂದ (ಎಂ.ಆರ್.ನಂಬರ್ 28/94–95) ಖರೀದಿಸಿದ್ದರು. ಕೆ.ಆರ್.ಪುರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 2005ರಲ್ಲಿ ನೋಂದಣಿಯಾಗಿತ್ತು.</p>.<p>ಬಳಿಕ ತಂದೆ ಅನಾರೋಗ್ಯಪೀಡಿತರಾಗಿದ್ದರಿಂದ ಫ್ರಾನ್ಸಿಸ್ ಅವರು ಹೊಸೂರಿನಲ್ಲಿ ವಾಸವಾಗಿದ್ದರು. ಈ ನಡುವೆ, ಚನ್ನಸಂದ್ರದಿಂದ ಹೆಣ್ಣೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಪಾಲಿಕೆ ಮುಂದಾಗಿತ್ತು. ಈ ವೇಳೆ,<br />ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡಲು ತೀರ್ಮಾನಿಸಿತ್ತು. ಅಕ್ಕಪ್ಪ ಎಂಬುವರು ಸರ್ವೆ ಸಂಖ್ಯೆ 576ರಲ್ಲಿ 03.02 ಗುಂಟೆ ಜಮೀನು ಹೊಂದಿದ್ದು, ಈ ಜಾಗದಲ್ಲಿ 15 ಅಡಿ ಮಾತ್ರ ರಸ್ತೆಗೆ ಉಪಯೋಗವಾಗಿರುತ್ತದೆ. ಆದರೆ,<br />ಅಕ್ಕಪ್ಪ ಅವರು ಎಂ.ಎನ್.ದೇವರಾಜ್ ಅವರ ಸಹಾಯ ಪಡೆದು ಫ್ರಾನ್ಸಿಸ್ ಅವರಿಗೆ ಸೇರಿದ ಜಮೀನನ್ನು ಸೇರಿಸಿಕೊಂಡು ಒಟ್ಟು 7.14 ಗುಂಟೆ ಜಮೀನಿಗೆ (722.50 ಚದರ ಮೀಟರ್) ಹಾಗೂ ಆ ಜಾಗದಲ್ಲಿ ನಿರ್ಮಿಸಿದ ಕಟ್ಟಡಕ್ಕೆ (2463.26 ಚದರ ಮೀಟರ್) ಟಿಡಿಆರ್ ಪಡೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>