ಬಳಿಕ ತಂದೆ ಅನಾರೋಗ್ಯಪೀಡಿತರಾಗಿದ್ದರಿಂದ ಫ್ರಾನ್ಸಿಸ್ ಅವರು ಹೊಸೂರಿನಲ್ಲಿ ವಾಸವಾಗಿದ್ದರು. ಈ ನಡುವೆ, ಚನ್ನಸಂದ್ರದಿಂದ ಹೆಣ್ಣೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಪಾಲಿಕೆ ಮುಂದಾಗಿತ್ತು. ಈ ವೇಳೆ,
ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡಲು ತೀರ್ಮಾನಿಸಿತ್ತು. ಅಕ್ಕಪ್ಪ ಎಂಬುವರು ಸರ್ವೆ ಸಂಖ್ಯೆ 576ರಲ್ಲಿ 03.02 ಗುಂಟೆ ಜಮೀನು ಹೊಂದಿದ್ದು, ಈ ಜಾಗದಲ್ಲಿ 15 ಅಡಿ ಮಾತ್ರ ರಸ್ತೆಗೆ ಉಪಯೋಗವಾಗಿರುತ್ತದೆ. ಆದರೆ,
ಅಕ್ಕಪ್ಪ ಅವರು ಎಂ.ಎನ್.ದೇವರಾಜ್ ಅವರ ಸಹಾಯ ಪಡೆದು ಫ್ರಾನ್ಸಿಸ್ ಅವರಿಗೆ ಸೇರಿದ ಜಮೀನನ್ನು ಸೇರಿಸಿಕೊಂಡು ಒಟ್ಟು 7.14 ಗುಂಟೆ ಜಮೀನಿಗೆ (722.50 ಚದರ ಮೀಟರ್) ಹಾಗೂ ಆ ಜಾಗದಲ್ಲಿ ನಿರ್ಮಿಸಿದ ಕಟ್ಟಡಕ್ಕೆ (2463.26 ಚದರ ಮೀಟರ್) ಟಿಡಿಆರ್ ಪಡೆದಿದ್ದರು.