‘ವೈಚಾರಿಕತೆ ಎಂದರೆ ಆಸ್ತಿಕತೆ, ಧರ್ಮವನ್ನು ವಿರೋಧಿಸುವ ಮಾರ್ಗವಲ್ಲ; ಅವರ ಮನೋಭಾವಗಳನ್ನು ಗೌರವಿಸುವುದಾಗಿದೆ. ಕನ್ನಡ ಒಂದು ಸಂಸ್ಕೃತಿಯಾದರೆ, ಧರ್ಮ ವೈಯಕ್ತಿಕವಾಗಿರುತ್ತದೆ. ಎಲ್ಲ ಕಾಲದಲ್ಲೂ ಧರ್ಮ ಒಂದೇ ರೂಪದಲ್ಲಿ ಇರಲು ಸಾಧ್ಯವಿಲ್ಲ ಎಂಬ ಸತ್ಯ ಅರ್ಥ ಮಾಡಿಕೊಂಡು ಸಾಗಬೇಕು. ಅದೇ ಧರ್ಮ ಸಹಿಷ್ಣುತೆ. ನಿಜವಾದ ಬಹುತ್ವ. ಇಂತಹ ಅಂಶಗಳನ್ನು ಒಳಗೊಂಡ ಕಾರಣಕ್ಕಾಗಿಯೇ ಕನ್ನಡದ ಕೃತಿಗಳು, ದಾರ್ಶನಿಕರು ಬಹುತ್ವದ ಪ್ರತಿಪಾದಕರೇ ಆಗಿದ್ದರು’ ಎಂದು ವಿಶ್ಲೇಷಿಸಿದರು.