<p><strong>ಹೆಸರಘಟ್ಟ:</strong> ದಾಸನಪುರ ಹೋಬಳಿಯ ಗೋಪಾಲಪುರ ಮತ್ತು ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಾತ್ರಿ ವೇಳೆ ಕಾರಿನಲ್ಲಿ ಬಂದು ಕುರಿ ಮತ್ತು ಮೇಕೆಗಳನ್ನು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. </p>.<p>’ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದೇವೆ. ಆದರೂ ಕಳ್ಳತನಗಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ’ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಕೃತ್ಯಗಳನ್ನು ತಡೆಯುವುದಕ್ಕಾಗಿ ಕೆಲವು ಕಡೆ ರಾತ್ರಿಯೆಲ್ಲ ರೈತರು ನಿದ್ದೆಗೆಟ್ಟು ಕಾವಲು ಕಾಯುವಂತಾಗಿದೆ.</p>.<p><strong>ರಾತ್ರಿ ವೇಳೆ ಕಳವು: </strong>ರಾತ್ರಿ ಸುಮಾರು ಒಂದು ಗಂಟೆಯ ನಂತರ ಇನೋವಾ ಕಾರಿನಲ್ಲಿ ಬರುವ ಕಳ್ಳರ ತಂಡ ಮೊದಲು ಮನೆಗಳಿಗೆ ಹೊರಗಿನಿಂದ ಚಿಲಕ ಹಾಕುತ್ತದೆ. ನಂತರ ಶೆಡ್ಗಳ ಬಾಗಿಲು ಒಡೆದು, ಅದರೊಳಗಿದ್ದ ಮೇಕೆ ಕುರಿಗಳನ್ನು ಕಾರಿನೊಳಗೆ ತುಂಬಿಕೊಂಡು ಹೋಗುತ್ತಿದೆ. ಈ ರೀತಿ ಕುರಿ–ಮೇಕೆ ಕಳವು ಮಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.</p>.<p>‘ಮಕ್ಕಳ ಶಾಲಾ ಶುಲ್ಕ ಕಟ್ಟುವುದಕ್ಕಾಗಿಯೇ ಮೇಕೆಗಳನ್ನು ಸಾಕಿದ್ದೆ. ಸುಮಾರು ₹1.55 ಲಕ್ಷ ಬೆಲೆ ಬಾಳುವಂತಹ ಮೇಕೆಗಳವು. ರಾತ್ರೋರಾತ್ರಿ ಕೊಟ್ಟಿಗೆ(ಶೆಡ್) ಬೀಗ ಒಡೆದು ಅವುಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಆದರೂ ಪ್ರಯೋಜನವಾಗಿಲ್ಲ‘ ಎಂದು ಬೊಮ್ಮಶೆಟ್ಟಿಹಳ್ಳಿ ಗ್ರಾಮದ ರೈತ ಮಹಿಳೆ ಸೌಭಾಗ್ಯ ಬೇಸರದಿಂದ ನುಡಿದರು.</p>.<p>‘ನಮ್ಮದು ₹1.60 ಲಕ್ಷ ಮೌಲ್ಯದ ಒಂಬತ್ತು ಮೇಕೆಗಳನ್ನು ಕಳ್ಳತನವಾಗಿದೆ. ಯುಗಾದಿ ಸಮಯದಲ್ಲಿ ಅವುಗಳನ್ನು ಮಾರಾಟ ಮಾಡಬೇಕೆಂದು ಸಾಕಿಕೊಂಡಿದ್ದೆವು‘ ಎಂದು ಬೆತ್ತನಗೆರೆ ಗ್ರಾಮದ ದೊಡ್ಡಯ್ಯ ‘ಪ್ರಜಾವಾಣಿ’ಯೊಂದಿಗೆ ಸಂಕಟ ತೋಡಿಕೊಂಡರು.</p>.<p><strong>ದೂರು ದಾಖಲು :</strong> ದೊಡ್ಡಿಪಾಳ್ಯ ಗ್ರಾಮದ ರೈತ ಮುನಿಕುಮಾರ ಅವರಿಗೆ ಸೇರಿದ ₹60 ಸಾವಿರ ಮೌಲ್ಯದ 3 ಹೋತಗಳು, ಹುಸ್ಕೂರು ಗ್ರಾಮದ ರೈತ ಮಹೇಶ ಅವರಿಗೆ ಸೇರಿದ ₹1.10 ಲಕ್ಷ ಮೌಲ್ಯದ 11 ಮೇಕೆಗಳನ್ನು ಹೀಗೆ ರಾತ್ರಿ ವೇಳೆ ಕಳ್ಳತನ ಮಾಡಲಾಗಿದೆ. ಮೇಕೆ ಮತ್ತು ಕುರಿಗಳನ್ನು ಕಳೆದುಕೊಂಡ ಎಲ್ಲ ರೈತರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<p>ಕಳ್ಳತನಕ್ಕೆ ಹೆದರಿ ಗೋಪಾಲಪುರ ಮತ್ತು ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ರೈತರು ಕುರಿ ಮೇಕೆಗಳನ್ನು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದಷ್ಟು ಬೇಗ ಪೊಲೀಸರು ಕಳ್ಳರನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<p>ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಲಾಗಿದೆ. ಹಿಂದೆಯೂ ಇದೇ ರೀತಿಯ ಪ್ರಕರಣಗಳು ನಡೆದಿದ್ದು ಅಪರಾಧಿಗಳನ್ನು ಹಿಡಿದಿದ್ದೆವು. ಈಗ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಅಪರಾಧಿಗಳನ್ನು ಹಿಡಿಯಲಾಗುವುದು. </p><p><strong>–ಮುರಳೀಧರ್ ಎಂ.ಕೆ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆ</strong> </p><p>ಗೋಪಾಲಪುರ ಮತ್ತು ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ತಿಂಗಳುಗಳಿಂದ ಕುರಿ–ಮೇಕೆ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.</p><p><strong>–ಚಂದ್ರಶೇಖರ್ ವಿ. ಅಧ್ಯಕ್ಷ ಗೋಪಾಲಪುರ ಗ್ರಾಮ ಪಂಚಾಯಿತಿ</strong> </p><p>ಎಲ್ಲಾ ಮಾಹಿತಿ ತಿಳಿದವರೇ ಇಂಥ ಕೃತ್ಯ ಎಸಗಲು ಸಾಧ್ಯ. ಕುರಿ ಮೇಕೆ ಕಳೆದುಕೊಂಡ ರೈತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೇಗ ಕಳ್ಳರನ್ನು ಹಿಡಿಯಬೇಕು.</p><p><strong>– ಬಿ. ರಮೇಶ್ ಅಧ್ಯಕ್ಷ ಹುಸ್ಕೂರು ಗ್ರಾಮ ಪಂಚಾಯಿತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೆಸರಘಟ್ಟ:</strong> ದಾಸನಪುರ ಹೋಬಳಿಯ ಗೋಪಾಲಪುರ ಮತ್ತು ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ರಾತ್ರಿ ವೇಳೆ ಕಾರಿನಲ್ಲಿ ಬಂದು ಕುರಿ ಮತ್ತು ಮೇಕೆಗಳನ್ನು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. </p>.<p>’ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದೇವೆ. ಆದರೂ ಕಳ್ಳತನಗಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ’ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಕೃತ್ಯಗಳನ್ನು ತಡೆಯುವುದಕ್ಕಾಗಿ ಕೆಲವು ಕಡೆ ರಾತ್ರಿಯೆಲ್ಲ ರೈತರು ನಿದ್ದೆಗೆಟ್ಟು ಕಾವಲು ಕಾಯುವಂತಾಗಿದೆ.</p>.<p><strong>ರಾತ್ರಿ ವೇಳೆ ಕಳವು: </strong>ರಾತ್ರಿ ಸುಮಾರು ಒಂದು ಗಂಟೆಯ ನಂತರ ಇನೋವಾ ಕಾರಿನಲ್ಲಿ ಬರುವ ಕಳ್ಳರ ತಂಡ ಮೊದಲು ಮನೆಗಳಿಗೆ ಹೊರಗಿನಿಂದ ಚಿಲಕ ಹಾಕುತ್ತದೆ. ನಂತರ ಶೆಡ್ಗಳ ಬಾಗಿಲು ಒಡೆದು, ಅದರೊಳಗಿದ್ದ ಮೇಕೆ ಕುರಿಗಳನ್ನು ಕಾರಿನೊಳಗೆ ತುಂಬಿಕೊಂಡು ಹೋಗುತ್ತಿದೆ. ಈ ರೀತಿ ಕುರಿ–ಮೇಕೆ ಕಳವು ಮಾಡುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.</p>.<p>‘ಮಕ್ಕಳ ಶಾಲಾ ಶುಲ್ಕ ಕಟ್ಟುವುದಕ್ಕಾಗಿಯೇ ಮೇಕೆಗಳನ್ನು ಸಾಕಿದ್ದೆ. ಸುಮಾರು ₹1.55 ಲಕ್ಷ ಬೆಲೆ ಬಾಳುವಂತಹ ಮೇಕೆಗಳವು. ರಾತ್ರೋರಾತ್ರಿ ಕೊಟ್ಟಿಗೆ(ಶೆಡ್) ಬೀಗ ಒಡೆದು ಅವುಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಆದರೂ ಪ್ರಯೋಜನವಾಗಿಲ್ಲ‘ ಎಂದು ಬೊಮ್ಮಶೆಟ್ಟಿಹಳ್ಳಿ ಗ್ರಾಮದ ರೈತ ಮಹಿಳೆ ಸೌಭಾಗ್ಯ ಬೇಸರದಿಂದ ನುಡಿದರು.</p>.<p>‘ನಮ್ಮದು ₹1.60 ಲಕ್ಷ ಮೌಲ್ಯದ ಒಂಬತ್ತು ಮೇಕೆಗಳನ್ನು ಕಳ್ಳತನವಾಗಿದೆ. ಯುಗಾದಿ ಸಮಯದಲ್ಲಿ ಅವುಗಳನ್ನು ಮಾರಾಟ ಮಾಡಬೇಕೆಂದು ಸಾಕಿಕೊಂಡಿದ್ದೆವು‘ ಎಂದು ಬೆತ್ತನಗೆರೆ ಗ್ರಾಮದ ದೊಡ್ಡಯ್ಯ ‘ಪ್ರಜಾವಾಣಿ’ಯೊಂದಿಗೆ ಸಂಕಟ ತೋಡಿಕೊಂಡರು.</p>.<p><strong>ದೂರು ದಾಖಲು :</strong> ದೊಡ್ಡಿಪಾಳ್ಯ ಗ್ರಾಮದ ರೈತ ಮುನಿಕುಮಾರ ಅವರಿಗೆ ಸೇರಿದ ₹60 ಸಾವಿರ ಮೌಲ್ಯದ 3 ಹೋತಗಳು, ಹುಸ್ಕೂರು ಗ್ರಾಮದ ರೈತ ಮಹೇಶ ಅವರಿಗೆ ಸೇರಿದ ₹1.10 ಲಕ್ಷ ಮೌಲ್ಯದ 11 ಮೇಕೆಗಳನ್ನು ಹೀಗೆ ರಾತ್ರಿ ವೇಳೆ ಕಳ್ಳತನ ಮಾಡಲಾಗಿದೆ. ಮೇಕೆ ಮತ್ತು ಕುರಿಗಳನ್ನು ಕಳೆದುಕೊಂಡ ಎಲ್ಲ ರೈತರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>.<p>ಕಳ್ಳತನಕ್ಕೆ ಹೆದರಿ ಗೋಪಾಲಪುರ ಮತ್ತು ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ರೈತರು ಕುರಿ ಮೇಕೆಗಳನ್ನು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದಷ್ಟು ಬೇಗ ಪೊಲೀಸರು ಕಳ್ಳರನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.</p>.<p>ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಿಸಲಾಗಿದೆ. ಹಿಂದೆಯೂ ಇದೇ ರೀತಿಯ ಪ್ರಕರಣಗಳು ನಡೆದಿದ್ದು ಅಪರಾಧಿಗಳನ್ನು ಹಿಡಿದಿದ್ದೆವು. ಈಗ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಅಪರಾಧಿಗಳನ್ನು ಹಿಡಿಯಲಾಗುವುದು. </p><p><strong>–ಮುರಳೀಧರ್ ಎಂ.ಕೆ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆ</strong> </p><p>ಗೋಪಾಲಪುರ ಮತ್ತು ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ತಿಂಗಳುಗಳಿಂದ ಕುರಿ–ಮೇಕೆ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.</p><p><strong>–ಚಂದ್ರಶೇಖರ್ ವಿ. ಅಧ್ಯಕ್ಷ ಗೋಪಾಲಪುರ ಗ್ರಾಮ ಪಂಚಾಯಿತಿ</strong> </p><p>ಎಲ್ಲಾ ಮಾಹಿತಿ ತಿಳಿದವರೇ ಇಂಥ ಕೃತ್ಯ ಎಸಗಲು ಸಾಧ್ಯ. ಕುರಿ ಮೇಕೆ ಕಳೆದುಕೊಂಡ ರೈತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೇಗ ಕಳ್ಳರನ್ನು ಹಿಡಿಯಬೇಕು.</p><p><strong>– ಬಿ. ರಮೇಶ್ ಅಧ್ಯಕ್ಷ ಹುಸ್ಕೂರು ಗ್ರಾಮ ಪಂಚಾಯಿತಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>