‘ತನ್ನನ್ನು ಹಿಡಿಯಲು ಬಂದ ಹೆಡ್ ಕಾನ್ಸ್ಟೆಬಲ್ ಮಂಜುನಾಥ್ ಅವರ ಮೇಲೆಯೇ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದ. ಹೆಡ್ ಕಾನ್ಸ್ಟೆಬಲ್ ರಕ್ಷಣೆಗೆ ಧಾವಿಸಿದ್ದ ಪಿಎಸ್ಐ ಕೃಷ್ಣಮೂರ್ತಿ, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದ್ದರು. ಶರಣಾಗಲು ಒಪ್ಪದ ಆರೋಪಿ, ಪಿಎಸ್ಐ ಮೇಲೂ ಹಲ್ಲೆ ನಡೆಸಲು ಮುಂದಾಗಿದ್ದ. ಆಗ ಪಿಎಸ್ಐ, ಆತನ ಬಲಗಾಲಿಗೆ ಗುಂಡು ಹಾರಿಸಿದರು.’ ಎಂದು ಅವರು ಮಾಹಿತಿ ನೀಡಿದರು.