<p><strong>ನೆಲಮಂಗಲ:</strong> ಮನೆಯಲ್ಲಿ ಬಡತನ, ಹೇಳಿಕೊಳ್ಳುವಂತಹ ಅನುಕೂಲಗಳಿಲ್ಲದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 611 ಅಂಕ ಗಳಿಸುವ ಮೂಲಕ ಅನಿತಾ ಮತ್ತು ಸಿ.ಚಂದನಾ ಸಾಧನೆ ಮಾಡಿದ್ದಾರೆ.</p>.<p>ಇಬ್ಬರು ವಿಶಾಲ್ ಆಂಗ್ಲ ಶಾಲೆ ವಿದ್ಯಾರ್ಥಿನಿಯರು.</p>.<p>ಅನಿತಾಳ ಪೋಷಕರಾದ ದೀಪಕ್ ಬಹದ್ದೂರ್ ಮತ್ತು ದುರ್ಗಾ ನೇಪಾಳದವರು. ಇವರು 20 ವರ್ಷಗಳಿಂದ ನೆಲಮಂಗಲದಲ್ಲಿ ನೆಲೆಸಿದ್ದಾರೆ.ದೀಪಕ್ ಅವರು ಕಾರ್ಖಾನೆಯಲ್ಲಿ ಸಹಾಯಕರಾಗಿದ್ದಾರೆ.</p>.<p>‘ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಪಾಠವನ್ನೇ ಗಮನ ವಹಿಸಿ ಕೇಳುತ್ತಿದ್ದೆ. ಮನೆಯಲ್ಲಿ ನಿತ್ಯವೂ ಅಭ್ಯಾಸ ಮಾಡಿ<br />ದ್ದರ ಫಲವಾಗಿ ಹೆಚ್ಚು ಅಂಕ ಬಂದಿದೆ. 620 ಅಂಕಗಳಿಗಿಂತ ಹೆಚ್ಚು ಗಳಿಸುವ ನಿರೀಕ್ಷೆ ಇತ್ತು’ ಎನ್ನುತ್ತಾರೆ ಅನಿತಾ.</p>.<p>ಸಿ.ಚಂದನಾ ಪೋಷಕರು ಶಾಲೆಯ ಶುಲ್ಕ ಪಾವತಿಸಲು ಅಶಕ್ತರಾಗಿದ್ದರು. ತಂದೆ ಚಿಕ್ಕಣ್ಣ ಎಂ.ಎ.ಪದವೀಧರರಾಗಿದ್ದರೂ ನಿರುದ್ಯೋಗಿಯಾಗಿದ್ದಾರೆ. ಚಂದನಾಳ ಪ್ರತಿಭೆಯನ್ನು ಮನಗಂಡು ಶಾಲೆಯ ಅಧ್ಯಕ್ಷ ಟಿ.ಕೆ.ನರಸೇಗೌಡ ಅವರು ಶಾಲಾ ಸಮವಸ್ತ್ರ, ಪುಸ್ತಕಗಳನ್ನು ನೀಡಿ ಉಚಿತವಾಗಿ ಶಿಕ್ಷಣ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲಮಂಗಲ:</strong> ಮನೆಯಲ್ಲಿ ಬಡತನ, ಹೇಳಿಕೊಳ್ಳುವಂತಹ ಅನುಕೂಲಗಳಿಲ್ಲದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 611 ಅಂಕ ಗಳಿಸುವ ಮೂಲಕ ಅನಿತಾ ಮತ್ತು ಸಿ.ಚಂದನಾ ಸಾಧನೆ ಮಾಡಿದ್ದಾರೆ.</p>.<p>ಇಬ್ಬರು ವಿಶಾಲ್ ಆಂಗ್ಲ ಶಾಲೆ ವಿದ್ಯಾರ್ಥಿನಿಯರು.</p>.<p>ಅನಿತಾಳ ಪೋಷಕರಾದ ದೀಪಕ್ ಬಹದ್ದೂರ್ ಮತ್ತು ದುರ್ಗಾ ನೇಪಾಳದವರು. ಇವರು 20 ವರ್ಷಗಳಿಂದ ನೆಲಮಂಗಲದಲ್ಲಿ ನೆಲೆಸಿದ್ದಾರೆ.ದೀಪಕ್ ಅವರು ಕಾರ್ಖಾನೆಯಲ್ಲಿ ಸಹಾಯಕರಾಗಿದ್ದಾರೆ.</p>.<p>‘ಶಾಲೆಯಲ್ಲಿ ಹೇಳಿಕೊಡುತ್ತಿದ್ದ ಪಾಠವನ್ನೇ ಗಮನ ವಹಿಸಿ ಕೇಳುತ್ತಿದ್ದೆ. ಮನೆಯಲ್ಲಿ ನಿತ್ಯವೂ ಅಭ್ಯಾಸ ಮಾಡಿ<br />ದ್ದರ ಫಲವಾಗಿ ಹೆಚ್ಚು ಅಂಕ ಬಂದಿದೆ. 620 ಅಂಕಗಳಿಗಿಂತ ಹೆಚ್ಚು ಗಳಿಸುವ ನಿರೀಕ್ಷೆ ಇತ್ತು’ ಎನ್ನುತ್ತಾರೆ ಅನಿತಾ.</p>.<p>ಸಿ.ಚಂದನಾ ಪೋಷಕರು ಶಾಲೆಯ ಶುಲ್ಕ ಪಾವತಿಸಲು ಅಶಕ್ತರಾಗಿದ್ದರು. ತಂದೆ ಚಿಕ್ಕಣ್ಣ ಎಂ.ಎ.ಪದವೀಧರರಾಗಿದ್ದರೂ ನಿರುದ್ಯೋಗಿಯಾಗಿದ್ದಾರೆ. ಚಂದನಾಳ ಪ್ರತಿಭೆಯನ್ನು ಮನಗಂಡು ಶಾಲೆಯ ಅಧ್ಯಕ್ಷ ಟಿ.ಕೆ.ನರಸೇಗೌಡ ಅವರು ಶಾಲಾ ಸಮವಸ್ತ್ರ, ಪುಸ್ತಕಗಳನ್ನು ನೀಡಿ ಉಚಿತವಾಗಿ ಶಿಕ್ಷಣ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>