<p><strong>ಬೆಂಗಳೂರು</strong>: ‘ದೇಶದಲ್ಲಿದ್ದ 554 ರಾಜ್ಯಗಳನ್ನು ಸರ್ದಾರ್ ವಲ್ಲಭಭಾಯಿ ಪಟೇಲರು ಶ್ರಮ ವಹಿಸಿ ಒಕ್ಕೂಟ ವ್ಯವಸ್ಥೆ ವ್ಯಾಪ್ತಿಗೆ ತಂದರು. ಮರಳಿ ಹಿಂದಿನ ಸ್ಥಿತಿಗೆ ಕೊಂಡೊಯ್ಯುವ ಪ್ರಯತ್ನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ಆರ್. ರಮೇಶ್ಕುಮಾರ್ ಅಭಿಪ್ರಾಯಪಟ್ಟರು.</p>.<p>‘ಬಿ.ವಿ.ಕಕ್ಕಿಲ್ಲಾಯ–ನೂರರ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ತರುವ ಅನಿವಾರ್ಯತೆ ಏನಿತ್ತು. ತಲಾಖ್ ನಿಷೇಧಕ್ಕೆ ಯಾವ ಮುಸ್ಲಿಂ ಹೆಣ್ಣು ಮಗಳು ಅಮಿತ್ ಶಾ ಅವರಿಗೆ ಅರ್ಜಿ ಸಲ್ಲಿಸಿದ್ದರು’ ಎಂದು ಪ್ರಶ್ನಿಸಿದರು.</p>.<p>‘ಈ ರೀತಿಯ ವಿಷಯಗಳಿಗೆ ಸಂಸತ್ತಿನ ಸಮಯ ಹಾಳು ಮಾಡಲಾಗಿದೆ. ಇದರ ಬದಲು ಜಿಡಿಪಿ ಹೆಚ್ಚಳಕ್ಕೆ ಏನು ಮಾಡಬೇಕು, ಆರ್ಥಿಕತೆ ಬಲಪಡಿಸಲು ಯಾವ ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಬಹುದಿತ್ತು’ ಎಂದರು.</p>.<p>‘ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಮಾತ್ರ ತೊಂದರೆಯಾಗುವುದಿಲ್ಲ. ಎಲ್ಲರೂ ಸಮಸ್ಯೆಗೆ ಸಿಲುಕಬೇಕಾಗಿದೆ. ಹೀಗಾಗಿ, ಯುವಜನತೆ ಬೀದಿಗೆ ಇಳಿದಿದ್ದಾರೆ. ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಈ ಮಟ್ಟದಲ್ಲಿ ಬೀದಿಗೆ ಇಳಿದಿರುವುದು ಇದೇ ಮೊದಲು’ ಎಂದು ಹೇಳಿದರು.</p>.<p>‘ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಕಮ್ಯುನಿಸ್ಟರ ಪಾತ್ರ’ ಎಂಬ ವಿಷಯದ ಕುರಿತು ಲೇಖಕ ಸಿದ್ದನಗೌಡ ಪಾಟೀಲ ಉಪನ್ಯಾಸ ನೀಡಿದರು. ಇದೇ ವೇಳೆ ‘ಬಿ.ವಿ. ಕಕ್ಕಿಲ್ಲಾಯ ಇನ್ ಪಾರ್ಲಿಮೆಂಟ್’, ‘ಮನುಷ್ಯನ ಮಹಾಯಾನ’, ‘ಕರ್ನಾಟಕ ವಿಧಾನಸಭೆಯಲ್ಲಿ ಕಕ್ಕಿಲ್ಲಾಯರು’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ದೇಶದಲ್ಲಿದ್ದ 554 ರಾಜ್ಯಗಳನ್ನು ಸರ್ದಾರ್ ವಲ್ಲಭಭಾಯಿ ಪಟೇಲರು ಶ್ರಮ ವಹಿಸಿ ಒಕ್ಕೂಟ ವ್ಯವಸ್ಥೆ ವ್ಯಾಪ್ತಿಗೆ ತಂದರು. ಮರಳಿ ಹಿಂದಿನ ಸ್ಥಿತಿಗೆ ಕೊಂಡೊಯ್ಯುವ ಪ್ರಯತ್ನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡುತ್ತಿದ್ದಾರೆ’ ಎಂದು ಶಾಸಕ ಕೆ.ಆರ್. ರಮೇಶ್ಕುಮಾರ್ ಅಭಿಪ್ರಾಯಪಟ್ಟರು.</p>.<p>‘ಬಿ.ವಿ.ಕಕ್ಕಿಲ್ಲಾಯ–ನೂರರ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ತರುವ ಅನಿವಾರ್ಯತೆ ಏನಿತ್ತು. ತಲಾಖ್ ನಿಷೇಧಕ್ಕೆ ಯಾವ ಮುಸ್ಲಿಂ ಹೆಣ್ಣು ಮಗಳು ಅಮಿತ್ ಶಾ ಅವರಿಗೆ ಅರ್ಜಿ ಸಲ್ಲಿಸಿದ್ದರು’ ಎಂದು ಪ್ರಶ್ನಿಸಿದರು.</p>.<p>‘ಈ ರೀತಿಯ ವಿಷಯಗಳಿಗೆ ಸಂಸತ್ತಿನ ಸಮಯ ಹಾಳು ಮಾಡಲಾಗಿದೆ. ಇದರ ಬದಲು ಜಿಡಿಪಿ ಹೆಚ್ಚಳಕ್ಕೆ ಏನು ಮಾಡಬೇಕು, ಆರ್ಥಿಕತೆ ಬಲಪಡಿಸಲು ಯಾವ ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಬಹುದಿತ್ತು’ ಎಂದರು.</p>.<p>‘ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಮಾತ್ರ ತೊಂದರೆಯಾಗುವುದಿಲ್ಲ. ಎಲ್ಲರೂ ಸಮಸ್ಯೆಗೆ ಸಿಲುಕಬೇಕಾಗಿದೆ. ಹೀಗಾಗಿ, ಯುವಜನತೆ ಬೀದಿಗೆ ಇಳಿದಿದ್ದಾರೆ. ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಈ ಮಟ್ಟದಲ್ಲಿ ಬೀದಿಗೆ ಇಳಿದಿರುವುದು ಇದೇ ಮೊದಲು’ ಎಂದು ಹೇಳಿದರು.</p>.<p>‘ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಕಮ್ಯುನಿಸ್ಟರ ಪಾತ್ರ’ ಎಂಬ ವಿಷಯದ ಕುರಿತು ಲೇಖಕ ಸಿದ್ದನಗೌಡ ಪಾಟೀಲ ಉಪನ್ಯಾಸ ನೀಡಿದರು. ಇದೇ ವೇಳೆ ‘ಬಿ.ವಿ. ಕಕ್ಕಿಲ್ಲಾಯ ಇನ್ ಪಾರ್ಲಿಮೆಂಟ್’, ‘ಮನುಷ್ಯನ ಮಹಾಯಾನ’, ‘ಕರ್ನಾಟಕ ವಿಧಾನಸಭೆಯಲ್ಲಿ ಕಕ್ಕಿಲ್ಲಾಯರು’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>