‘ಶೋಭಾರಾಣಿ ಅವರು ಸರ್ಕಾರಿ ಕಾರಿನಲ್ಲಿ ಅಂದು ಮನೆಯಿಂದ ಕಚೇರಿಗೆ ಹೊರಟಿದ್ದರು. ಗೊರಗುಂಟೆಪಾಳ್ಯದ ಟ್ರಾಫಿಕ್ ಸಿಗ್ನಲ್ ಬಳಿ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ ಅಭಿಷೇಕ್ ಎಂಬಾತ ಎಸ್ಪಿ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಕಾರು ನಿಲ್ಲಿಸಿದ ಚಾಲಕ, ಕೆಳಗೆ ಇಳಿದು ಪರಿಶೀಲಿಸುವಾಗ, ದ್ವಿಚಕ್ರ ವಾಹನ ಸವಾರ ಚಾಲಕನನ್ನು ನಿಂದಿಸಲು ಆರಂಭಿಸಿದ್ದ. ಇದನ್ನು ಗಮನಿಸಿದ ಶೋಭಾರಾಣಿ ಅವರು ದ್ವಿಚಕ್ರ ವಾಹನ ಸವಾರನಿಗೆ ಬುದ್ಧಿವಾದ ಹೇಳಲು ಮುಂದಾಗಿದ್ದಾರೆ. ಆಗ ಕೆರಳಿದ ಆರೋಪಿ, ಮಹಿಳಾ ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ಗಳಿಂದ ನಿಂದಿಸಿದ್ದ. ಕರ್ತವ್ಯಕ್ಕೆ ಹೋಗದಂತೆ ಅಡ್ಡಿಪಡಿಸಿದ್ದ. ಅಧಿಕಾರಿ ನೀಡಿದ ದೂರು ಆಧರಿಸಿ ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.