ಮೇಲ್ಸೇತುವೆ ದುರಸ್ತಿಪಡಿಸುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ವಿಫಲವಾಗಿದೆ. ಸಂಚಾರ ದಟ್ಟಣೆಗಳ ನಡುವೆ ಸಿಗ್ನಲ್ಗಳಲ್ಲಿ ಕಾದು ವಾಹನಗಳನ್ನು ಚಲಾಯಿಸಬೇಕಾದ ಸ್ಥಿತಿ ಇದ್ದು, ಸವಾರರು ನರಕ ಯಾತನೆ ಅನುಭವಿಸುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಕ್ರಮಿಸಬಹುದಾದ ದೂರಕ್ಕೆ ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಸ್ಥಿತಿ ಇದೆ. ಒಂದೆರಡು ದಿನಗಳಲ್ಲಿ ರಸ್ತೆ ಸರಿಯಾಗಲಿದೆ ಎಂದು ಜನ ಕಾಯುವುದು ತಪ್ಪಿಲ್ಲ ಎಂದು ಸಂಘಟನೆ ತಿಳಿಸಿದೆ.