‘ನಮ್ಮ ವೈಟ್ಫೀಲ್ಡ್’ ಸಂಘಟನೆಯ ಸ್ವಯಂಸೇವಕ ಸಂದೀಪ್ ಅನಿರುಧನ್, ‘ಇದು ಸರ್ವಿಸ್ ರಸ್ತೆ. ಅದರ ಪಕ್ಕದಲ್ಲೇ ವಿಶಾಲವಾದ ರಸ್ತೆ ಇದೆ. ಹಾಗಾಗಿ ಸರ್ವಿಸ್ ರಸ್ತೆ ವಿಸ್ತರಣೆಯ ಅಗತ್ಯವಿರಲಿಲ್ಲ. ಅಧಿಕಾರಿಗಳು ಅನುಮತಿ ಪಡೆದೇ ಮರ ಕಡಿದಿದ್ದೇವೆ ಎಂದಾಗ ಸುಮ್ಮನಾದೆವು. ಆದರೆ, ಯಾವುದೇ ಅನುಮತಿ ಇಲ್ಲದೇ ಮರ ಕಡಿಯುತ್ತಿದ್ದಾರೆ ಎಂದರೆ ಅದರಲ್ಲೇನೋ ಸಂಚು ಇದೆ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.