<p><strong>ರಾಜರಾಜೇಶ್ವರಿನಗರ:</strong> ಕೊಟ್ಟಿಗೆಪಾಳ್ಯ ವಾರ್ಡ್ನ ಸುಮನಹಳ್ಳಿ ರಸ್ತೆಯಲ್ಲಿ ರಾಮಕೃಷ್ಣಪ್ಪ ಲೇಔಟ್, ಗಂಗಮ್ಮಗಾರ್ಡನ್, ಮಾಳಗಾಲವರೆಗಿನ ರಸ್ತೆಯ ಎರಡು ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕಾಗಿ, ಆ ಜಾಗದಲ್ಲಿದ್ದ ಹತ್ತಾರು ಮರಗಳನ್ನು ಕಡಿದು ಹಾಕಲಾಗಿದೆ.</p>.<p>ಹೊಸ ವರ್ತುಲ ರಸ್ತೆಯ ಅಂಡರ್ಪಾಸ್ನಿಂದ ಮಾಳಗಾಲದ ಬಸ್ ತಂಗುದಾಣದವರೆಗೆ ಪಾದಚಾರಿ ಮಾರ್ಗ ನಿರ್ಮಿಸಲು ಮಣ್ಣು ಅಗೆದು ಅಲ್ಲಿದ್ದ ಮರದ ಬೇರುಗಳನ್ನು ಕತ್ತರಿಸಿ ಹಾಕಿದ್ದಾರೆ. ಇದರಿಂದ ಕೆಲವು ಮರಗಳು ಉರುಳಿವೆ. ಈ ಬಗ್ಗೆ ನಾಗರಿಕರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ರಾಮಕೃಷ್ಣಪ್ಪ ಲೇಔಟ್, ಇಂದಿರಾ ಕ್ಯಾಂಟೀನ್ವರೆಗಿರುವ ರಸ್ತೆಯ ಒಂದು ಭಾಗದಲ್ಲಿ ಇಂದಿರಾ ಕ್ಯಾಂಟೀನ್, ಒಣಕಸ ಸಂಗ್ರಹದ ಘಟಕ, ಮತ್ತೊಂದು ಭಾಗದಲ್ಲಿ ಬೋಸ್ಕೊ ವೃತ್ತಿಪರ ತರಬೇತಿ ಕೇಂದ್ರವಿದೆ. ಈ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಅವಶ್ಯಕತೆಯಿರಲಿಲ್ಲ’ ಎಂದು ಇಲ್ಲಿನ ನಿವಾಸಿಗಳು ದೂರಿದರು.</p>.<p>‘ಪಾದಚಾರಿ ಮಾರ್ಗ ಮಾಡಬೇಕಾದರೆ, ಮರಗಳನ್ನು ಬಿಟ್ಟು ಪಕ್ಕದಲ್ಲಿ ಮಾಡಬಹುದಿತ್ತು. ಬಿಬಿಎಂಪಿ, ವರ್ಷದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಸಿಗಳನ್ನು ನೆಡುತ್ತದೆ. ಅವಶ್ಯಕತೆ ಇಲ್ಲದಿದ್ದರೂ ಅಭಿವೃದ್ದಿ ಹೆಸರಿನಲ್ಲಿ ಮರಗಳ ಮಾರಣ ಹೋಮ ಮಾಡುವುದು ಎಷ್ಟು ಸರಿ’ ಎಂದು ಸ್ಥಳೀಯ ನಿವಾಸಿ ಲತಾ ಪ್ರಶ್ನಿಸುತ್ತಾರೆ.</p>.<p>‘ಬಿಬಿಎಂಪಿಯ ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ ಅವರ ನಿರ್ಲಕ್ಷ್ಯದಿಂದ ಅಗತ್ಯವಿಲ್ಲದಿದ್ದರೂ ಅಭಿವೃದ್ದಿ ಹೆಸರಲ್ಲಿ ಮರಗಳು ನಾಶವಾಗುತ್ತಿವೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು</p>.<p>ಲಗ್ಗೆರೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವರನಾರಾಯಣ ಮಾತನಾಡಿ ‘ನಾನು ಬರುವ ಮೊದಲೇ ಮಣ್ಣು ಅಗೆದು ಹಾಕಲಾಗಿತ್ತು. ನನ್ನ ಅವಧಿಯಲ್ಲಿ ಕಾಮಗಾರಿ ಪ್ರಾರಂಭವಾಗಿರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜರಾಜೇಶ್ವರಿನಗರ:</strong> ಕೊಟ್ಟಿಗೆಪಾಳ್ಯ ವಾರ್ಡ್ನ ಸುಮನಹಳ್ಳಿ ರಸ್ತೆಯಲ್ಲಿ ರಾಮಕೃಷ್ಣಪ್ಪ ಲೇಔಟ್, ಗಂಗಮ್ಮಗಾರ್ಡನ್, ಮಾಳಗಾಲವರೆಗಿನ ರಸ್ತೆಯ ಎರಡು ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕಾಗಿ, ಆ ಜಾಗದಲ್ಲಿದ್ದ ಹತ್ತಾರು ಮರಗಳನ್ನು ಕಡಿದು ಹಾಕಲಾಗಿದೆ.</p>.<p>ಹೊಸ ವರ್ತುಲ ರಸ್ತೆಯ ಅಂಡರ್ಪಾಸ್ನಿಂದ ಮಾಳಗಾಲದ ಬಸ್ ತಂಗುದಾಣದವರೆಗೆ ಪಾದಚಾರಿ ಮಾರ್ಗ ನಿರ್ಮಿಸಲು ಮಣ್ಣು ಅಗೆದು ಅಲ್ಲಿದ್ದ ಮರದ ಬೇರುಗಳನ್ನು ಕತ್ತರಿಸಿ ಹಾಕಿದ್ದಾರೆ. ಇದರಿಂದ ಕೆಲವು ಮರಗಳು ಉರುಳಿವೆ. ಈ ಬಗ್ಗೆ ನಾಗರಿಕರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>‘ರಾಮಕೃಷ್ಣಪ್ಪ ಲೇಔಟ್, ಇಂದಿರಾ ಕ್ಯಾಂಟೀನ್ವರೆಗಿರುವ ರಸ್ತೆಯ ಒಂದು ಭಾಗದಲ್ಲಿ ಇಂದಿರಾ ಕ್ಯಾಂಟೀನ್, ಒಣಕಸ ಸಂಗ್ರಹದ ಘಟಕ, ಮತ್ತೊಂದು ಭಾಗದಲ್ಲಿ ಬೋಸ್ಕೊ ವೃತ್ತಿಪರ ತರಬೇತಿ ಕೇಂದ್ರವಿದೆ. ಈ ರಸ್ತೆಯಲ್ಲಿ ಪಾದಚಾರಿ ಮಾರ್ಗದ ಅವಶ್ಯಕತೆಯಿರಲಿಲ್ಲ’ ಎಂದು ಇಲ್ಲಿನ ನಿವಾಸಿಗಳು ದೂರಿದರು.</p>.<p>‘ಪಾದಚಾರಿ ಮಾರ್ಗ ಮಾಡಬೇಕಾದರೆ, ಮರಗಳನ್ನು ಬಿಟ್ಟು ಪಕ್ಕದಲ್ಲಿ ಮಾಡಬಹುದಿತ್ತು. ಬಿಬಿಎಂಪಿ, ವರ್ಷದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಸಿಗಳನ್ನು ನೆಡುತ್ತದೆ. ಅವಶ್ಯಕತೆ ಇಲ್ಲದಿದ್ದರೂ ಅಭಿವೃದ್ದಿ ಹೆಸರಿನಲ್ಲಿ ಮರಗಳ ಮಾರಣ ಹೋಮ ಮಾಡುವುದು ಎಷ್ಟು ಸರಿ’ ಎಂದು ಸ್ಥಳೀಯ ನಿವಾಸಿ ಲತಾ ಪ್ರಶ್ನಿಸುತ್ತಾರೆ.</p>.<p>‘ಬಿಬಿಎಂಪಿಯ ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ ಅವರ ನಿರ್ಲಕ್ಷ್ಯದಿಂದ ಅಗತ್ಯವಿಲ್ಲದಿದ್ದರೂ ಅಭಿವೃದ್ದಿ ಹೆಸರಲ್ಲಿ ಮರಗಳು ನಾಶವಾಗುತ್ತಿವೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು</p>.<p>ಲಗ್ಗೆರೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವರನಾರಾಯಣ ಮಾತನಾಡಿ ‘ನಾನು ಬರುವ ಮೊದಲೇ ಮಣ್ಣು ಅಗೆದು ಹಾಕಲಾಗಿತ್ತು. ನನ್ನ ಅವಧಿಯಲ್ಲಿ ಕಾಮಗಾರಿ ಪ್ರಾರಂಭವಾಗಿರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>