<p><strong>ಕೆ.ಆರ್.ಪುರ: </strong>‘ಅಭಿವೃದ್ಧಿಯ ಹೆಸರಿನಲ್ಲಿ ಎಚ್ಎಎಲ್ ಮುಖ್ಯ ರಸ್ತೆಯ ಸುರಂಜನ್ ದಾಸ್ ಜಂಕ್ಷನ್ ಬಳಿ ಕೆಳ ಸೇತುವೆ ನಿರ್ಮಾಣಕ್ಕಾಗಿ ಸಾಲುಮರಗಳಿಗೆ ಪಾಲಿಕೆಯು ಕೊಡಲಿ ಹಾಕುವುದನ್ನು ನಿಲ್ಲಿಸಿ ಮರಗಳಿಗೆ ರಕ್ಷಣೆ ನೀಡಬೇಕು’ ಎಂದು ವೃಕ್ಷ ಬಚಾವೋ ಆಂದೋಲನ ಸಮಿತಿಯ ಸದಸ್ಯರು ಭಾನುವಾರ ಅಭಿಯಾನ ನಡೆಸಿದರು.</p>.<p>ಪಾಲಿಕೆ ಸದಸ್ಯ ಎನ್. ರಮೇಶ್ ನೇತೃತ್ವದಲ್ಲಿ ಮರಗಳಿಗೆ ಬಟ್ಟೆಯ ಪರದೆ ಕಟ್ಟುವ ಮೂಲಕ ಮರ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.</p>.<p>ಎಚ್ಎಎಲ್ ಬಸ್ ನಿಲ್ದಾಣ ಬಳಿ ಹಮ್ಮಿಕೊಂಡಿದ್ದ ಈ ಅಭಿಯಾನದಲ್ಲಿ ‘ನಮ್ಮ ಮರ ನಮ್ಮ ಉಸಿರು’, ‘ಇದು ನನ್ನ ಕಣ್ಣೀರು, ರಕ್ತ ಕಣ್ಣೀರು’, ‘ಮರಕ್ಕೂ ಜೀವವಿದೆ ಅಳಲು ಬಿಡಬೇಡಿ’ ಎಂಬ ಘೋಷವಾಕ್ಯಗಳನ್ನು ಕೂಗಿದರು.</p>.<p>ಎನ್. ರಮೇಶ್, ‘ಸರ್ಕಾರವು ಅಭಿವೃದ್ಧಿ ಹೆಸರಿನಲ್ಲಿ ಮೆಟ್ರೊ, ಮೇಲ್ಸೇತುವೆ, ಕೆಳಸೇತುವೆ ಎಂದು ಹೇಳಿಕೊಂಡು 150 ರಿಂದ 200 ವರ್ಷಗಳ ಮರಗಳನ್ನು ರಾತ್ರೋ ರಾತ್ರಿ ಕಡಿಯಲು ಮುಂದಾಗಿದೆ. ಮರಗಳನ್ನು ಕೊಡಲಿ ಹಾಕುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.</p>.<p>‘ಮುಖ್ಯ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ವಿಸ್ತರಣೆಗೆ ಸರ್ವೀಸ್ ರಸ್ತೆ ಮಾಡಿಕೊಂಡು ಈ ಮರಗಳ ಬದಲಾಗಿ ಬೇರೆ ಗಿಡಗಳನ್ನು ನೆಟ್ಟರೆ ನಮ್ಮ ಅಭ್ಯಂತರವಿಲ್ಲ. ಆದರೆ ಮರಗಳಿಗೆ ಕಟ್ಟರ್, ಕೊಡಲಿ, ಇಂಜೆಕ್ಷನ್ ಕೊಡುವುದು, ಆಸಿಡ್ ಹಾಕುವುದನ್ನು ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ವೃಕ್ಷ ಬಚಾವೋ ಆಂದೋಲನ ಸಮಿತಿಯ ಮುಖ್ಯಸ್ಥ ಪರಿಸರ ಮಂಜು, ‘ಎಚ್ಎಎಲ್ ಮುಖ್ಯ ರಸ್ತೆಯ ಕೆಳ ಸೇತುವೆ ನಿರ್ಮಾಣಕ್ಕೆ ಅಡ್ಡಲಾಗಿರುವ ಮರಗಳನ್ನು ತೆರವುಗೊಳಿಸಲು ಒಟ್ಟು 48 ಮರಗಳ ಪೈಕಿ 25 ಕ್ಕೆ ಕೊಡಲಿ ಏಟು ನೀಡಲು ಪಾಲಿಕೆ ನಿರ್ಧರಿಸಿದೆ. ಈಗಾಗಲೇ 8 ಬೃಹತ್ ಮರಗಳನ್ನು ಕತ್ತರಿಸಲಾಗಿದ್ದು ಇನ್ನುಳಿದ ಹದಿನೇಳು ಮರಗಳ ರಕ್ಷಣೆಗೆ ಮುಂದಾಗಿದ್ದೇವೆ’ ಎಂದರು.</p>.<p>ವನ್ಯಜೀವಿ ಸಂರಕ್ಷಕ ಸಿಂಹಾದ್ರಿ ಕಿರಣ್ ಕುಮಾರ್, ಲಕ್ಷ್ಮೀನಾರಾಯಣ, ಹರೀಶ್, ಶಿವಪ್ಪ ಹಾಗೂ ಸ್ಥಳೀಯ ಪರಿಸರ ಪ್ರೇಮಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್.ಪುರ: </strong>‘ಅಭಿವೃದ್ಧಿಯ ಹೆಸರಿನಲ್ಲಿ ಎಚ್ಎಎಲ್ ಮುಖ್ಯ ರಸ್ತೆಯ ಸುರಂಜನ್ ದಾಸ್ ಜಂಕ್ಷನ್ ಬಳಿ ಕೆಳ ಸೇತುವೆ ನಿರ್ಮಾಣಕ್ಕಾಗಿ ಸಾಲುಮರಗಳಿಗೆ ಪಾಲಿಕೆಯು ಕೊಡಲಿ ಹಾಕುವುದನ್ನು ನಿಲ್ಲಿಸಿ ಮರಗಳಿಗೆ ರಕ್ಷಣೆ ನೀಡಬೇಕು’ ಎಂದು ವೃಕ್ಷ ಬಚಾವೋ ಆಂದೋಲನ ಸಮಿತಿಯ ಸದಸ್ಯರು ಭಾನುವಾರ ಅಭಿಯಾನ ನಡೆಸಿದರು.</p>.<p>ಪಾಲಿಕೆ ಸದಸ್ಯ ಎನ್. ರಮೇಶ್ ನೇತೃತ್ವದಲ್ಲಿ ಮರಗಳಿಗೆ ಬಟ್ಟೆಯ ಪರದೆ ಕಟ್ಟುವ ಮೂಲಕ ಮರ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.</p>.<p>ಎಚ್ಎಎಲ್ ಬಸ್ ನಿಲ್ದಾಣ ಬಳಿ ಹಮ್ಮಿಕೊಂಡಿದ್ದ ಈ ಅಭಿಯಾನದಲ್ಲಿ ‘ನಮ್ಮ ಮರ ನಮ್ಮ ಉಸಿರು’, ‘ಇದು ನನ್ನ ಕಣ್ಣೀರು, ರಕ್ತ ಕಣ್ಣೀರು’, ‘ಮರಕ್ಕೂ ಜೀವವಿದೆ ಅಳಲು ಬಿಡಬೇಡಿ’ ಎಂಬ ಘೋಷವಾಕ್ಯಗಳನ್ನು ಕೂಗಿದರು.</p>.<p>ಎನ್. ರಮೇಶ್, ‘ಸರ್ಕಾರವು ಅಭಿವೃದ್ಧಿ ಹೆಸರಿನಲ್ಲಿ ಮೆಟ್ರೊ, ಮೇಲ್ಸೇತುವೆ, ಕೆಳಸೇತುವೆ ಎಂದು ಹೇಳಿಕೊಂಡು 150 ರಿಂದ 200 ವರ್ಷಗಳ ಮರಗಳನ್ನು ರಾತ್ರೋ ರಾತ್ರಿ ಕಡಿಯಲು ಮುಂದಾಗಿದೆ. ಮರಗಳನ್ನು ಕೊಡಲಿ ಹಾಕುವ ಕೆಲಸ ಮಾಡುತ್ತಿದೆ’ ಎಂದು ದೂರಿದರು.</p>.<p>‘ಮುಖ್ಯ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ವಿಸ್ತರಣೆಗೆ ಸರ್ವೀಸ್ ರಸ್ತೆ ಮಾಡಿಕೊಂಡು ಈ ಮರಗಳ ಬದಲಾಗಿ ಬೇರೆ ಗಿಡಗಳನ್ನು ನೆಟ್ಟರೆ ನಮ್ಮ ಅಭ್ಯಂತರವಿಲ್ಲ. ಆದರೆ ಮರಗಳಿಗೆ ಕಟ್ಟರ್, ಕೊಡಲಿ, ಇಂಜೆಕ್ಷನ್ ಕೊಡುವುದು, ಆಸಿಡ್ ಹಾಕುವುದನ್ನು ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ವೃಕ್ಷ ಬಚಾವೋ ಆಂದೋಲನ ಸಮಿತಿಯ ಮುಖ್ಯಸ್ಥ ಪರಿಸರ ಮಂಜು, ‘ಎಚ್ಎಎಲ್ ಮುಖ್ಯ ರಸ್ತೆಯ ಕೆಳ ಸೇತುವೆ ನಿರ್ಮಾಣಕ್ಕೆ ಅಡ್ಡಲಾಗಿರುವ ಮರಗಳನ್ನು ತೆರವುಗೊಳಿಸಲು ಒಟ್ಟು 48 ಮರಗಳ ಪೈಕಿ 25 ಕ್ಕೆ ಕೊಡಲಿ ಏಟು ನೀಡಲು ಪಾಲಿಕೆ ನಿರ್ಧರಿಸಿದೆ. ಈಗಾಗಲೇ 8 ಬೃಹತ್ ಮರಗಳನ್ನು ಕತ್ತರಿಸಲಾಗಿದ್ದು ಇನ್ನುಳಿದ ಹದಿನೇಳು ಮರಗಳ ರಕ್ಷಣೆಗೆ ಮುಂದಾಗಿದ್ದೇವೆ’ ಎಂದರು.</p>.<p>ವನ್ಯಜೀವಿ ಸಂರಕ್ಷಕ ಸಿಂಹಾದ್ರಿ ಕಿರಣ್ ಕುಮಾರ್, ಲಕ್ಷ್ಮೀನಾರಾಯಣ, ಹರೀಶ್, ಶಿವಪ್ಪ ಹಾಗೂ ಸ್ಥಳೀಯ ಪರಿಸರ ಪ್ರೇಮಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>