‘ಸುರಂಗ ಮಾರ್ಗ ನಿರ್ಮಾಣ ವೇಳೆ ಮಣ್ಣು ಕುಸಿದು, ಸುಮಾರು 10 ಅಡಿ ಅಷ್ಟು ಆಳವಾದ ಗುಂಡಿ ಬಿದ್ದಿದೆ. ಆ ಸ್ಥಳವನ್ನು ಮಣ್ಣು, ಸಿಮೆಂಟ್ ಸೇರಿದಂತೆ ಇತರೆ ವಸ್ತುಗಳನ್ನು ಬಳಸಿ ಗಟ್ಟಿ ಮಾಡಲಾಗಿದೆ. ಆ ಸ್ಥಳವಿನ್ನೂ ಹಸಿಯಾಗಿದ್ದು, ಸಂಪೂರ್ಣ ಒಣಗಲು ಎಂಟರಿಂದ ಹತ್ತು ದಿನಗಳು ಬೇಕಾಗಬಹುದು. ಗಟ್ಟಿಯಾದ ನಂತರ ಕಾಮಗಾರಿ ಮುಂದುವರಿಸಲಾಗುವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.