‘ಈ ಅರಣ್ಯದಲ್ಲಿ ನವಿಲುಗಳು ಸೇರಿದಂತೆ 200ಕ್ಕೂ ವಿವಿಧ ಪ್ರಭೇದದ ಪ್ರಾಣಿ, ಪಕ್ಷಿಗಳು ಇವೆ. ಪ್ರಧಾನಮಂತ್ರಿ, ಮುಖ್ಯಮಂತ್ರಿ ಎಲ್ಲರಿಗೂ ಮನವಿ ಸಲ್ಲಿಸಿದರೂ ಕಾಮಗಾರಿ ನಡೆಯುತ್ತಿದೆ. ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಕೇಳಿದರೆ, ಈ ಬಗ್ಗೆ ನನಗೇನೂ ಗೊತ್ತೇ ಇಲ್ಲ ಎನ್ನುತ್ತಾರೆ. ಮರಗಳ ಉದ್ಯಾನಕ್ಕೆ ತಡೆ ನೀಡದೇ ಹೋದರೆ ತುರಹಳ್ಳಿ ಅರಣ್ಯವೂ ನಾಶವಾಗುವುದರಲ್ಲಿ ಸಂಶಯವಿಲ್ಲ’ ಎಂದು ಪ್ರತಿಭಟನೆಕಾರ ಡಾ.ಎ. ಭಾನು ಹೇಳಿದರು.