‘ಹಲವು ದೈತ್ಯ ಬಿಲ್ಡರ್ಗಳು ತುರಹಳ್ಳಿ ಅರಣ್ಯವನ್ನು ನಿರಂತರವಾಗಿ ಅತಿಕ್ರಮಿಸುತ್ತಾ ಬರುತ್ತಿದ್ದಾರೆ. ಅತಿಕ್ರಮಣವನ್ನು ತೆರವುಗೊಳಿಸುವ ಬದಲು ಇರುವ ಅರಣ್ಯ ಪ್ರದೇಶವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ‘ಟ್ರೀ ಪಾರ್ಕ್’ ಸ್ಥಾಪಿಸಲು ಮುಂದಾಗಿರುವ ಕ್ರಮ ಖಂಡನಾರ್ಹ’ ಎಂದು ಸಮಿತಿಯ ಕಾರ್ಯದರ್ಶಿ ಕೆ.ಎನ್. ಉಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.