<p><strong>ಬೆಂಗಳೂರು:</strong> ಸಿಂಗಪುರದಿಂದ ತಂದಿದ್ದ 15 ಲ್ಯಾಪ್ಟಾಪ್ಗಳನ್ನು ಕಸ್ಟಮ್ಸ್ ಸುಂಕ ವಿಧಿಸದೆ ಬಿಡುಗಡೆ ಮಾಡಲು ₹45 ಸಾವಿರ ಲಂಚ ಪಡೆದಿದ್ದ ಕಸ್ಟಮ್ಸ್ ಅಧಿಕಾರಿ ಸೇರಿ ಇಬ್ಬರಿಗೆ ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.</p>.<p>ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ವಿ. ಶ್ರೀನಿವಾಸ ಪ್ರಸಾದ್ ಮತ್ತು ಅದೇ ಕಚೇರಿಯಲ್ಲಿ ಮುಖ್ಯ ಹವಾಲ್ದಾರ್ ಆಗಿದ್ದ ಎ. ಲೌರ್ಡುಪ್ರಭು ಶಿಕ್ಷೆಗೊಳಗಾದವರು.</p>.<p>ಟಿ. ಶ್ರೀಕುಮಾರ್ ಎಂಬವರು ಸಿಂಗಪುರದಿಂದ 15 ಲ್ಯಾಪ್ಟಾಪ್ಗಳನ್ನು ತಂದಿದ್ದರು. ಕಸ್ಟಮ್ಸ್ ಅಧಿಕಾರಿ<br />ಯಾಗಿದ್ದ ಶ್ರೀನಿವಾಸ ಪ್ರಸಾದ್, ಲಗೇಜ್ ತಪಾಸಣೆ ನಡೆಸಿ, ನಿಲ್ದಾಣದ ಆವರಣದಿಂದ ಲ್ಯಾಪ್ಟಾಪ್ ತೆಗೆದು<br />ಕೊಂಡು ಹೊರ ಹೋಗಬೇಕೆಂದರೆ ₹1.62 ಲಕ್ಷ ಕಸ್ಟಮ್ಸ್ ಸುಂಕ ಕಟ್ಟಬೇಕಾಗುತ್ತದೆ. ಹಾಗೇ ಮಾಡದಿರಲು ₹1 ಲಕ್ಷ ಹಾಗೂ 2 ಲ್ಯಾಪ್ಟಾಪ್ಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಮಾತುಕತೆ ಬಳಿಕ ₹45 ಸಾವಿರಕ್ಕೆ ಒಪ್ಪಿದ್ದರು. ಆದರೆ, ಲಂಚ ನೀಡಲು ಇಚ್ಛಿಸದ ಶ್ರೀಕುಮಾರ್, ಸಿಬಿಐಗೆ ದೂರು ನೀಡಿದ್ದರು. ಸಿಬಿಐ ಅಧಿಕಾರಿಗಳು 2015ರ ಅಕ್ಟೋಬರ್ ತಿಂಗಳಲ್ಲಿ ಇಬ್ಬರನ್ನು ಬಂಧಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಿಂಗಪುರದಿಂದ ತಂದಿದ್ದ 15 ಲ್ಯಾಪ್ಟಾಪ್ಗಳನ್ನು ಕಸ್ಟಮ್ಸ್ ಸುಂಕ ವಿಧಿಸದೆ ಬಿಡುಗಡೆ ಮಾಡಲು ₹45 ಸಾವಿರ ಲಂಚ ಪಡೆದಿದ್ದ ಕಸ್ಟಮ್ಸ್ ಅಧಿಕಾರಿ ಸೇರಿ ಇಬ್ಬರಿಗೆ ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.</p>.<p>ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ವಿ. ಶ್ರೀನಿವಾಸ ಪ್ರಸಾದ್ ಮತ್ತು ಅದೇ ಕಚೇರಿಯಲ್ಲಿ ಮುಖ್ಯ ಹವಾಲ್ದಾರ್ ಆಗಿದ್ದ ಎ. ಲೌರ್ಡುಪ್ರಭು ಶಿಕ್ಷೆಗೊಳಗಾದವರು.</p>.<p>ಟಿ. ಶ್ರೀಕುಮಾರ್ ಎಂಬವರು ಸಿಂಗಪುರದಿಂದ 15 ಲ್ಯಾಪ್ಟಾಪ್ಗಳನ್ನು ತಂದಿದ್ದರು. ಕಸ್ಟಮ್ಸ್ ಅಧಿಕಾರಿ<br />ಯಾಗಿದ್ದ ಶ್ರೀನಿವಾಸ ಪ್ರಸಾದ್, ಲಗೇಜ್ ತಪಾಸಣೆ ನಡೆಸಿ, ನಿಲ್ದಾಣದ ಆವರಣದಿಂದ ಲ್ಯಾಪ್ಟಾಪ್ ತೆಗೆದು<br />ಕೊಂಡು ಹೊರ ಹೋಗಬೇಕೆಂದರೆ ₹1.62 ಲಕ್ಷ ಕಸ್ಟಮ್ಸ್ ಸುಂಕ ಕಟ್ಟಬೇಕಾಗುತ್ತದೆ. ಹಾಗೇ ಮಾಡದಿರಲು ₹1 ಲಕ್ಷ ಹಾಗೂ 2 ಲ್ಯಾಪ್ಟಾಪ್ಗಳನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಮಾತುಕತೆ ಬಳಿಕ ₹45 ಸಾವಿರಕ್ಕೆ ಒಪ್ಪಿದ್ದರು. ಆದರೆ, ಲಂಚ ನೀಡಲು ಇಚ್ಛಿಸದ ಶ್ರೀಕುಮಾರ್, ಸಿಬಿಐಗೆ ದೂರು ನೀಡಿದ್ದರು. ಸಿಬಿಐ ಅಧಿಕಾರಿಗಳು 2015ರ ಅಕ್ಟೋಬರ್ ತಿಂಗಳಲ್ಲಿ ಇಬ್ಬರನ್ನು ಬಂಧಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>