ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೆ.ಪ್ರಕಾಶ್, ‘ನಮ್ಮದು ಶ್ರಮ ಸಂಸ್ಕೃತಿ. ದುಡಿಮೆ ನಂಬಿ ಬದುಕು ಸಾಗಬೇಕು. ದುಡಿಮೆಗೆ ಯಾವ ಭೇದ-ಭಾವವೂ ಇಲ್ಲ. ಆದರೆ, ದುಡಿಮೆಯ ಪಾಲು ದುಡಿಮೆಗಾರನಿಗೆ ಸಿಗದಂತೆ ಮಾಡಿ, ಸಂಪತ್ತನ್ನು ಲೂಟಿ ಮಾಡುವ ಸಲುವಾಗಿ ಶ್ರಮಜೀವಿಗಳ ನಡುವೆ ಕೋಮು ವಿಭಜನೆ ತರುವ ಪ್ರಯತ್ನ ನಡೆದಿದೆ’ ಎಂದು ಕಳವಳ ವ್ಯಕ್ತಪಡಿಸಿದರು. ‘ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯಲ್ಲಿ ಜನ ತತ್ತರಿಸುತ್ತಿರುವಾಗ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಕ್ಷುಲ್ಲಕ ವಿಚಾರಗಳನ್ನು ಮುಂದುಮಾಡಿ, ವಿಷ ಬೀಜಗಳನ್ನು ಬಿತ್ತಿ, ಸೌಹಾರ್ದ ಮನಸುಗಳನ್ನು ಒಡೆಯುವ ಷಡ್ಯಂತ್ರ ನಡೆದಿದೆ. ಆಳವಾಗಿ ಬೇರೂರಿರುವ ಸಹಬಾಳ್ವೆ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ’ ಎಂದರು. ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವೀಂದ್ರ, ‘ವಿವಿಧತೆಯಲ್ಲಿ ಏಕತೆ ಎಂಬುದೇ ನಿಜವಾದ ಭಾರತೀಯ ಸಂಸ್ಕೃತಿ. ಬೇಗೂರು ನಾಗನಾಥಸ್ವಾಮಿ ತೇರು ಬಾಬಯ್ಯನ ಗುಡಿ ಬಳಿ ಹೋಗಿ ಬರುವುದು ಈಗಲೂ ರೂಢಿಯಲ್ಲಿದೆ. ಇದು ಸೌಹಾರ್ದ ಸಂಸ್ಕೃತಿಯ ಪ್ರತೀಕ. ಇದಕ್ಕೆ ಧಕ್ಕೆ ತರುವ ಮತೀಯವಾದ
ವನ್ನು ನಿಗ್ರಹಿಸಬೇಕಿದೆ’ ಎಂದರು.