‘ಆಯುರ್ವೇದಿಕ್ ಸೆಂಟರ್ನಲ್ಲಿ ರೇಣುಕಾ ಕೆಲಸ ಮಾಡುತ್ತಿದ್ದಳು. ಇದರಿಂದ ಅನುಶ್ರೀಯ ಪರಿಚಯವಾಗಿತ್ತು. ಅನುಶ್ರೀ ಬಳಿ ಚಿನ್ನಾಭರಣ, ನಗದು ಇರಬಹುದು ಎಂದು ಭಾವಿಸಿ ಸುಲಿಗೆಗೆ ಸಂಚು ರೂಪಿಸಿ, ಪ್ರಭಾವತಿಗೆ ತಿಳಿಸಿದ್ದಳು. ಜ.13ರಂದು ಸಂಜೆ ಪ್ರಭಾವತಿ ಸೆಂಟರ್ಗೆ ಹೋಗಿ ಬೆನ್ನು ನೋವಿಗೆ ಚಿಕಿತ್ಸೆ ಬೇಕೆಂದು ಕೇಳಿದ್ದಳು. ಆಗ ಅನುಶ್ರೀ, ಮರು ದಿನ ಬರುವಂತೆ ಸೂಚಿಸಿದ್ದರು. ಮರು ದಿನ ಬೆಳಿಗ್ಗೆಯೇ ಸೆಂಟರ್ಗೆ ಬಂದ ಪ್ರಭಾವತಿಗೆ, ಅನುಶ್ರೀ ಚಿಕಿತ್ಸೆ ಕೊಡಲು ಒಳಗಡೆ ಕರೆದೊಯ್ಯುತ್ತಾರೆ. ಆಗ ರುದ್ರೇಶ್, ಸಂದೀಪ್ ಮತ್ತು ಗುರು ಏಕಾಏಕಿ ಸೆಂಟರ್ ಒಳಕ್ಕೆ ನುಗ್ಗಿದ್ದಾರೆ. ಐವರು ಸೇರಿಕೊಂಡು ಕರವಸ್ತ್ರ ತೆಗೆದು, ಅದರಲ್ಲಿದ್ದ ರಾಸಾಯನಿಕದಿಂದ ಅನುಶ್ರೀಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಹಾಗೂ ಮೊಬೈಲ್ ಸುಲಿಗೆ ಮಾಡಲಾಗಿತ್ತು’ ಎಂದು ಪೊಲೀಸರು ಹೇಳಿದರು.