<p>ಬೆಂಗಳೂರು: ಒಂದೆಡೆ ಬೇಟೆಯಾಡುತ್ತಿರುವ ಹುಲಿ–ಸಿಂಹ, ಹಿಮಚಿರತೆ ಕತ್ತೆಕಿರುಬಗಳ ಗುಂಪು, ಮತ್ತೊಂದೆಡೆ ಆನೆಯ ಗಾಂಭಿರ್ಯ ನಡಿಗೆ, ಪಕ್ಷಿಗಳ ಕಲರವ ಹಾಗೂ ಕೀಟಗಳು.. ಇಂಥ ಮನಮೋಹಕ ದೃಶ್ಯಗಳನ್ನು ತೆರೆದಿಡುವ ‘ವನ್ಯಜೀವಿ ಛಾಯಾಚಿತ್ರ ಪ್ರದರ್ಶನ’ ನಗರದ ಚಿತ್ರಕಲಾ ಪರಿಷತ್ನಲ್ಲಿ ಅನಾವರಣಗೊಂಡಿತ್ತು.</p>.<p>ವನ್ಯಜೀವಿ ಛಾಯಾಗ್ರಾಹಕ ರುದ್ರಪಟ್ಣಂ ಎಸ್. ರಮಾಕಾಂತ್ ಸೆರೆಹಿಡಿದಿರುವ ಅಪರೂಪದ ವನ್ಯಜೀವಿ ಛಾಯಾಚಿತ್ರಗಳನ್ನು ‘ನಿಸರ್ಗ ವೈಭವ ಮತ್ತು ವಿಸ್ಮಯ’ ಹೆಸರಿನಲ್ಲಿ ಪ್ರದರ್ಶಿಸಲಾಗಿದೆ. ಎರಡು ದಿನಗಳು ನಡೆದ ಈ ಏಕವ್ಯಕ್ತಿ ಚಿತ್ರ ಪ್ರದರ್ಶನವನ್ನು ನೂರಾರು ಮಂದಿ ವೀಕ್ಷಿಸಿದರು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪರಿಸರ ಪ್ರಿಯರು, ವನ್ಯಜೀವಿ ಛಾಯಾಚಿತ್ರಗಳಿಗೆ ಮನಸೋತರು. </p>.<p>ಈ ಪ್ರದರ್ಶನದಲ್ಲಿ ವಿವಿಧ ಪ್ರಭೇದಗಳು, ವಿವಿಧ ವರ್ಗಗಳ ವನ್ಯಜೀವಿಗಳು, ಪಕ್ಷಿಗಳ ಅದ್ಭುತ ಛಾಯಾಚಿತ್ರಗಳಿವೆ. ಲಡಾಖ್ನ ಹೆಮಿಸ್ ರಾಷ್ಟ್ರೀಯ ಉದ್ಯಾನದಲ್ಲಿ ಹಿಮಚಿರತೆಯೊಂದು ಬೇಟೆಯಾಡುತ್ತಿರುವ ದೃಶ್ಯ ನೋಡಗರನ್ನು ಸೆಳೆದರೆ, ಮತ್ತೊಂದೆಡೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ಬೇಟೆಯಾಡುತ್ತಿರುವ ದೃಶ್ಯವಂತಹ ಪ್ರೇಕ್ಷಕರನ್ನು ಬೆರಗುಗೊಳಿಸಿತು.</p>.<p>ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಉದ್ಯಾನದಲ್ಲಿ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿ ಮರ ಏರುತ್ತಿರುವ ದೃಶ್ಯ ವನ್ಯಜೀವಿ ಪ್ರೇಮಿಗಳನ್ನು ಮೂಕವಿಸ್ಮಿತರನ್ನಾಗಿಸಿತು.</p>.<p>ಪ್ರದರ್ಶನಕ್ಕೆ ಭೇಟಿ ನೀಡಿದರೆ ಹಿಮ ಕರಡಿ, ಆನೆಗಳು, ನರಿಗಳು, ಜೇಡಗಳು, ಜೀರುಂಡೆ ಕೀಟ ಮತ್ತು ವೈವಿಧ್ಯಮಯ ಪಕ್ಷಿ ಪ್ರಪಂಚವನ್ನು ಒಂದೇ ಸೂರಿನಡಿ ಕಣ್ತುಂಬಿಕೊಳ್ಳಬಹುದು. ವಿಶ್ವದ ಹಲವು ಸ್ಥಳಗಳಲ್ಲಿ ತೆಗೆದಿರುವ ವನ್ಯಜೀವಿ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಪ್ರದರ್ಶನ ಭಾನುವಾರವೂ ನಡೆಯಲಿದೆ. ಫೆಡರೇಷನ್ ಆಫ್ ಇಂಡಿಯನ್ ಫೋಟೊಗ್ರಫಿಯ ಉಪಾಧ್ಯಕ್ಷ ಸಿ.ಆರ್. ಸತ್ಯನಾರಾಯಣ್ ಹಾಗೂ ವನ್ಯಜೀವಿ ಛಾಯಾಗ್ರಾಹಕ ದಿನೇಶ್ ಕುಂಬ್ಳೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಒಂದೆಡೆ ಬೇಟೆಯಾಡುತ್ತಿರುವ ಹುಲಿ–ಸಿಂಹ, ಹಿಮಚಿರತೆ ಕತ್ತೆಕಿರುಬಗಳ ಗುಂಪು, ಮತ್ತೊಂದೆಡೆ ಆನೆಯ ಗಾಂಭಿರ್ಯ ನಡಿಗೆ, ಪಕ್ಷಿಗಳ ಕಲರವ ಹಾಗೂ ಕೀಟಗಳು.. ಇಂಥ ಮನಮೋಹಕ ದೃಶ್ಯಗಳನ್ನು ತೆರೆದಿಡುವ ‘ವನ್ಯಜೀವಿ ಛಾಯಾಚಿತ್ರ ಪ್ರದರ್ಶನ’ ನಗರದ ಚಿತ್ರಕಲಾ ಪರಿಷತ್ನಲ್ಲಿ ಅನಾವರಣಗೊಂಡಿತ್ತು.</p>.<p>ವನ್ಯಜೀವಿ ಛಾಯಾಗ್ರಾಹಕ ರುದ್ರಪಟ್ಣಂ ಎಸ್. ರಮಾಕಾಂತ್ ಸೆರೆಹಿಡಿದಿರುವ ಅಪರೂಪದ ವನ್ಯಜೀವಿ ಛಾಯಾಚಿತ್ರಗಳನ್ನು ‘ನಿಸರ್ಗ ವೈಭವ ಮತ್ತು ವಿಸ್ಮಯ’ ಹೆಸರಿನಲ್ಲಿ ಪ್ರದರ್ಶಿಸಲಾಗಿದೆ. ಎರಡು ದಿನಗಳು ನಡೆದ ಈ ಏಕವ್ಯಕ್ತಿ ಚಿತ್ರ ಪ್ರದರ್ಶನವನ್ನು ನೂರಾರು ಮಂದಿ ವೀಕ್ಷಿಸಿದರು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪರಿಸರ ಪ್ರಿಯರು, ವನ್ಯಜೀವಿ ಛಾಯಾಚಿತ್ರಗಳಿಗೆ ಮನಸೋತರು. </p>.<p>ಈ ಪ್ರದರ್ಶನದಲ್ಲಿ ವಿವಿಧ ಪ್ರಭೇದಗಳು, ವಿವಿಧ ವರ್ಗಗಳ ವನ್ಯಜೀವಿಗಳು, ಪಕ್ಷಿಗಳ ಅದ್ಭುತ ಛಾಯಾಚಿತ್ರಗಳಿವೆ. ಲಡಾಖ್ನ ಹೆಮಿಸ್ ರಾಷ್ಟ್ರೀಯ ಉದ್ಯಾನದಲ್ಲಿ ಹಿಮಚಿರತೆಯೊಂದು ಬೇಟೆಯಾಡುತ್ತಿರುವ ದೃಶ್ಯ ನೋಡಗರನ್ನು ಸೆಳೆದರೆ, ಮತ್ತೊಂದೆಡೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ಬೇಟೆಯಾಡುತ್ತಿರುವ ದೃಶ್ಯವಂತಹ ಪ್ರೇಕ್ಷಕರನ್ನು ಬೆರಗುಗೊಳಿಸಿತು.</p>.<p>ಕೀನ್ಯಾದ ಮಸಾಯಿ ಮಾರ ರಾಷ್ಟ್ರೀಯ ಉದ್ಯಾನದಲ್ಲಿ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿ ಮರ ಏರುತ್ತಿರುವ ದೃಶ್ಯ ವನ್ಯಜೀವಿ ಪ್ರೇಮಿಗಳನ್ನು ಮೂಕವಿಸ್ಮಿತರನ್ನಾಗಿಸಿತು.</p>.<p>ಪ್ರದರ್ಶನಕ್ಕೆ ಭೇಟಿ ನೀಡಿದರೆ ಹಿಮ ಕರಡಿ, ಆನೆಗಳು, ನರಿಗಳು, ಜೇಡಗಳು, ಜೀರುಂಡೆ ಕೀಟ ಮತ್ತು ವೈವಿಧ್ಯಮಯ ಪಕ್ಷಿ ಪ್ರಪಂಚವನ್ನು ಒಂದೇ ಸೂರಿನಡಿ ಕಣ್ತುಂಬಿಕೊಳ್ಳಬಹುದು. ವಿಶ್ವದ ಹಲವು ಸ್ಥಳಗಳಲ್ಲಿ ತೆಗೆದಿರುವ ವನ್ಯಜೀವಿ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಪ್ರದರ್ಶನ ಭಾನುವಾರವೂ ನಡೆಯಲಿದೆ. ಫೆಡರೇಷನ್ ಆಫ್ ಇಂಡಿಯನ್ ಫೋಟೊಗ್ರಫಿಯ ಉಪಾಧ್ಯಕ್ಷ ಸಿ.ಆರ್. ಸತ್ಯನಾರಾಯಣ್ ಹಾಗೂ ವನ್ಯಜೀವಿ ಛಾಯಾಗ್ರಾಹಕ ದಿನೇಶ್ ಕುಂಬ್ಳೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>